
ಚಂಢೀಗಡ (ನ.20): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಕಣ್ಣಿಗೆ ಇಟಾಲಿಯನ್ ಕನ್ನಡಕ ಹಾಕಿಕೊಂಡಿರುವುದರಿಂದದ ಅವರಿಗೆ ದೇಶದಲ್ಲಾದ ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲವೆಂದು ಶಾ ವ್ಯಂಗ್ಯವಾಡಿದ್ದಾರೆ.
ರಾಹುಲ್ ಬಾಬಾ ಇನ್ನೂ ಅಪ್ರಬುದ್ಧರಾಗಿದ್ದಾರೆ, ಆದುದರಿಂದ ಅವರು ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಿದ್ದಾರೆ. ಕಣ್ಣಿಗೆ ಇಟಾಲಿಯನ್ ಕನ್ನಡಕ ಹಾಕಿಕೊಂಡಿರುವುದರಿಂದ ಅವರಿಗೆ ಮೋದಿಯವರ ಆಡಳಿತದಲ್ಲಾಗಿರುವ ಯಾವುದೇ ಅಭಿವೃದ್ಧಿ ಕಾಣುವುದಿಲ್ಲ, ಎಂದು ಚಂಢೀಗಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.
ಪ್ರಧಾನಿ ಜನರಿಗಾಗಿ ಏನು ಮಾಡಿದ್ದಾರೆಂದು ಅವರು ಹೋದಲೆಲ್ಲಾ ಕೇಳುತ್ತಿದ್ದಾರೆ, ನಾವು ಮಾತನಾಡುವ ಪ್ರಧಾನಿಯನ್ನು ನೀಡಿದ್ದೇವೆ ಎಂಬುವುದನ್ನು ಅವರು ತಿಳಿದುಕೊಳ್ಳಬೇಕು, ಎಂದು ಶಾ ಕಿಡಿಕಾರಿದ್ದಾರೆ.
ಸರ್ಕಾರ ಏನು ಮಾಡಿದೆ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ, ನಮ್ಮ ಸರ್ಕಾರ ಉತ್ತಮ ಪಾರದರ್ಶಕ ಆಡಳಿತ ಕೊಟ್ಟಿದೆ, ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಿವಧಿಯಲ್ಲಿ ಏನು ಮಾಡಿದೆಯೆಂಬುವುದನ್ನು ರಾಹುಲ್ ತಿಳಿಸಬೇಕು, ಎಂದು ಅಮಿತ್ ಶಾ ಪ್ರತಿ ಸವಾಲೆಸೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.