
ವಯನಾಡು[ಜೂ.10]: ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿ ಗೆದ್ದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವ AIMIM ಮುಖ್ಯಸ್ಥ ಅಸಾವುದ್ದೀನ್ ಓವೈಸಿ 'ರಾಹುಲ್ ಗಾಂಧಿ ತನ್ನ ಸ್ವಕ್ಷೇತ್ರವಾಗಿದ್ದ ಅಮೇಠಿಯಲ್ಲಿ ಸೋತರೂ, ವಯನಾಡಿನಲ್ಲಿ ಗೆದ್ದಿದ್ದಾರೆ. ವಯನಾಡಿನ ಒಟ್ಟು ಮತದಾರರಲ್ಲಿ ಶೇ. 40ರಷ್ಟು ಮಂದಿ ಮುಸಲ್ಮಾನರಾಗಿರುವುದೇ ಇದಕ್ಕೆ ಕಾರಣ' ಎಂದಿದ್ದಾರೆ.
ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಓವೈಸಿ ಭಾನುವಾರದಂದು ಸಮಾವೇಶವನ್ನುದ್ದೇಶಿಸಿ ಮತನಾಡುತ್ತಾ '1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಹಿರಿಯರು ಹೊಸದೊಂದು ಭಾರತದ ಕನಸು ಕಂಡಿದ್ದರು. ಇದೊಂದು ಸ್ವತಂತ್ರ ಭಾರತ, ಗಾಂಧೀ, ನೆಹರೂ, ಅಂಬೇಡ್ಕರ್ ಹಾಗೂ ಅವರ ನೂರಾರು ಬೆಂಬಲಿಗರದ್ದಾಗುತ್ತದೆ. ಈಗಲೂ ನಮಗೆ ನಮ್ಮ ಹಕ್ಕು ಸಿಗುತ್ತದೆ ಎಂಬ ಭರವಸೆ ನನಗಿದೆ. ನಮಗೆ ಭಿಕ್ಷೆ ಬೇಕಾಗಿಲ್ಲ. ನಾವು ನಿಮ್ಮ ಭಿಕ್ಷೆಯಿಂದ ಬದುಕಲಿಚ್ಛಿಸುವುದಿಲ್ಲ' ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಓವೈಸಿ 'ನೀವು ಕಾಂಗ್ರೆಸ್ ಹಾಗೂ ಇನ್ನಿತರ ಸೆಕ್ಯೂಲರ್ ಪಕ್ಷಗಳನ್ನು ಬಿಟ್ಟು ಕೊಡಲು ತಯಾರಿಲ್ಲ. ಆದರೆ ಅವರ ಬಳಿ ಯಾವುದೇ ಬಲ ಹಾಗೂ ಯೋಜನೆಗಳಿಲ್ಲ ಎಮಬುವುದನ್ನು ನೆನಪಿಟ್ಟುಕೊಳ್ಳಿ. ಅವರು ಯಾವುದೇ ಶ್ರಮಪಡುವುದಿಲ್ಲ. ಬಿಜೆಪಿ ಎಲ್ಲೆಲ್ಲಾ ಸೋತಿದೆ? ಕೇವಲ ಪಂಜಾಬ್ ನಲ್ಲಿ, ಯಾಕೆಂದರೆ ಅಲ್ಲಿ ಸಿಖ್ಖರ ಪಾರುಪತ್ಯವಿದೆ. ಭಾರತದಲ್ಲಿ ಬೇರೆ ಪ್ರದೇಶಗಳಲ್ಲಿ ಬಿಜೆಪಿ ಸೋಲನುಭವಿಸಿದೆ ಎಂದಾದರೆ ಅದು ಪ್ರಾದೇಶಿಕ ಪಕ್ಷಗಳಿಂದ, ಕಾಂಗ್ರೆಸ್ ನಿಂದಲ್ಲ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.