ಮಲ್ಯ ಪರಾರಿಗೆ ನೀಲಿಗಣ್ಣಿನ ಅಧಿಕಾರಿ ನೆರವು : ರಾಹುಲ್ ಕಿಡಿ

Published : Sep 16, 2018, 11:31 AM ISTUpdated : Sep 19, 2018, 09:27 AM IST
ಮಲ್ಯ ಪರಾರಿಗೆ ನೀಲಿಗಣ್ಣಿನ ಅಧಿಕಾರಿ ನೆರವು : ರಾಹುಲ್ ಕಿಡಿ

ಸಾರಾಂಶ

ಸಿಬಿಐ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದ್ದರಿಂದ ಮಲ್ಯ ಅವರು ದೇಶ ಬಿಟ್ಟು ಓಡಿ ಹೋದರು.  ಲುಕೌಟ್ ನೋಟಿಸನ್ನು ಸಿಬಿಐನಲ್ಲಿ ದುರ್ಬಲಗೊಳಿಸಿದ್ದು ಮೋದಿ ಅವರ ‘ನೀಲಿಗಣ್ಣಿನ ಹುಡುಗ’ (ನೆಚ್ಚಿನ ಮನುಷ್ಯ)’ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ. 

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿ ದ್ದಾರೆ. ‘ಸಿಬಿಐ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದ್ದರಿಂದ ಮಲ್ಯ ಅವರು ದೇಶ ಬಿಟ್ಟು ಓಡಿ ಹೋದರು. 

ಲುಕೌಟ್ ನೋಟಿಸನ್ನು ಸಿಬಿಐನಲ್ಲಿ ದುರ್ಬಲಗೊಳಿಸಿದ್ದು ಮೋದಿ ಅವರ ‘ನೀಲಿಗಣ್ಣಿನ ಹುಡುಗ’ (ನೆಚ್ಚಿನ ಮನುಷ್ಯ)’ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ. ಶನಿವಾರ ಟ್ವೀಟ್ ಮಾಡಿರುವ ಅವರು, ‘ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರು ಮಲ್ಯ ವಿರುದ್ಧದ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದರು. 

ಇದರಿಂದಾಗಿ ಮಲ್ಯ ಪರಾರಿಯಾದರು. ಶರ್ಮಾ ಅವರು ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯ ಗಿದ್ದು, ಸಿಬಿಐನಲ್ಲಿನ ಮೋದಿ ಅವರ ‘ನೀಲಿಗಣ್ಣಿನ ಹುಡುಗ’. ಇದೇ ಅಧಿಕಾರಿಯು ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ಪರಾರಿಗೂ ಸಹಕರಿಸಿದ್ದಾರೆ. ಎಂಥಾ ತನಿಖೆ...’ ಎಂದು ಕಿಡಿಕಾರಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು