
ತಿರುವನಂತಪುರಂ[ಅ.17]: ಕಾಲೇಜು ಕ್ಯಾಂಪಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿನೋರ್ವ ಹೆಬ್ಬಾವು ಹಿಡಿಯಲು ಹೋಗಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಇಲ್ಲಿನ ನೈಯರ್ನಲ್ಲಿರುವ ಕೇರಳ ಇನ್ಸಿ$್ಟಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆವರಣದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಭುವಚಂದ್ರನ್ ನಾಯರ್ ಪೊದೆಗಳನ್ನು ಕತ್ತರಿಸುತ್ತಿರುವ ವೇಳೆ ದೂರದಲ್ಲಿ ಬಟ್ಟೆಯ ತುಂಡೊಂದು ಗೋಚರಿಸಿದೆ. ಅದನ್ನು ತೆರವುಗೊಳಿಸಲೆಂದು ಸನಿಹಕ್ಕೆ ಹೋದಾಗ ಅದು ಬೃಹತ್ ಗಾತ್ರದ ಹೆಬ್ಬಾವು ಎಂದು ತಿಳಿದು ಬಂದಿತ್ತು.
ಹೆಬ್ಬಾವನ್ನು ಹಿಡಿದು ಗೋಣಿ ಚೀಲಕ್ಕೆ ತುಂಬಿಸಲು ಹೊರಟಾಗ, ಕೆರಳಿದ ಹೆಬ್ಬಾವು ನಾಯರ್ ಕೊರಳಿಗೆ ಬಿಗಿಯಾಗಿ ಸುತ್ತಿಕೊಂಡಿದೆ. ಕೂಡಲೇ ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ ಹೆಬ್ಬಾವಿನ ಬೃಹತ್ ಗಾತ್ರ ಕಂಡು ಹತ್ತಿರ ಬರಲೂ ಹೆದರಿದ್ದಾರೆ. ಒಟ್ಟು 55 ರಷ್ಟುಮಂದಿ ಕೂಲಿಯಾಳುಗಳು ಅಲ್ಲೇ ಇದ್ದರೂ ಅಸಹಾಯಕರಾಗಿ ನಿಂತಿದ್ದರು. ಕೊನೆಗೆ ಇಬ್ಬರು ಬಂದು ನಾಯರ್ ಅವರನ್ನು ಹಾವಿನ ಹಿಡಿತದಿಂದ ಕಾಪಾಡಿದ್ದಾರೆ.
ಹೆಬ್ಬಾವು ಬಿಗಿಯಾಗಿ ಸುತ್ತಿದ್ದರಿಂದ ನಾಯರ್ ಕತ್ತಲ್ಲಿ ನೋವು ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾವನ್ನು್ನ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.