4 ಲಕ್ಷ ಕ್ಯಾಶ್, ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್!

Published : Aug 10, 2018, 02:20 PM IST
4 ಲಕ್ಷ ಕ್ಯಾಶ್, ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್!

ಸಾರಾಂಶ

- ಕನ್ನಡ ಸಂಘಟನೆ ಉಪಾಧ್ಯಕ್ಷನಿಂದ ಉದ್ಯಮಿಗೆ ದೋಖಾ  -ಸ್ನೇಹಿತನಿಗೇ ಮೋಸ ಮಾಡಿದ ಕನ್ನಡ ಸಂಘಟನೆ ಉಪಾಧ್ಯಕ್ಷ  - 4 ಲಕ್ಷ ಕ್ಯಾಶ್ ಹಾಗೂ ಕಾರ್ ಜೊತೆ ಎಸ್ಕೇಪ್ 

ಬೆಂಗಳೂರು (ಆ. 10): ಸಿಗರೇಟ್ ತರಲು ಹೇಳಿ ಕ್ಯಾಶ್ ಹಾಗೂ ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್ ಆಗಿದ್ದಾರೆ.  ಜನನಿಭೂಮಿ ಬೆಂಗಳೂರು ಉಪಾಧ್ಯಕ್ಷ ಗೋಪಿ ಗೊರಗುಂಟೆಪಾಳ್ಯದ ಉದ್ಯಮಿ ಕುಮಾರ್ ಗೆ ದೋಖಾ ಎಸಗಿದ್ದಾರೆ. 

ಸಂಬಂಧಿಗಳೊಬ್ಬರು ಆಸ್ಪತ್ರೆಯಲ್ಲಿದ್ದಾರೆಂದು  ಕುಮಾರ್ ಪಾಂಡವಪುರ ಡಿಸಿಸಿ ಬ್ಯಾಂಕಿನಿಂದ 4 ಲಕ್ಷ ಹಣ ಡ್ರಾ ಮಾಡಿದ್ದರು.  ಈ ವೇಳೆ ಗೋಪಿ ಹಾಗೂ ಇನ್ನೊಬ್ಬ ಸ್ನೇಹಿತ ಕುಮಾರ್ ಜೊತೆಗಿದ್ದರು.  ಬೆಂಗಳೂರಿಗೆ ಬಂದು ಮೊದಲು ಒಬ್ಬ ಸ್ನೇಹಿತನನ್ನ ಡ್ರಾಪ್ ಮಾಡಿದ ಕುಮಾರ್ ನಂತರ ಗೋಪಿಯನ್ನ ಡ್ರಾಪ್ ಮಾಡಲು ತೆರಳುತ್ತಿದ್ದರು.  ಈ ವೇಳೆ ಚಿಕ್ಕಜಾಲ ಬಳಿ ಸಿಗರೇಟ್ ತರಲು ಗೋಪಿ ಹೇಳಿದ್ದರು.  ಆಗ ಕಾರ್ ನಿಂದ ಇಳಿದು ಹೋಗಿದ್ದಾರೆ ಕುಮಾರ್.  ಈ ವೇಳೆ ಕಾರು ಹಾಗೂ 4 ಲಕ್ಷ ಕ್ಯಾಶ್ ಜೊತೆ ಪರಾರಿಯಾಗಿದ್ದಾರೆ ಗೋಪಿ. 

ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ