
ಬೆಂಗಳೂರು (ಜ.17): ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸೈಕೋಪಾತ್ ಸುದ್ದಿಯಾಗಿತ್ತು. ಇದೀಗ ಅದೇ ರೀತಿಯಾದ ಇನ್ನೋರ್ವ ಸೈಕೋಪಾತ್ ಎಂಟ್ರಿಯಾಗಿದ್ದಾನೆ.
ಇಲ್ಲಿನ ಬೈಯಪ್ಪನಹಳ್ಳಿಯ ಮೆಟ್ರೋ ಕ್ವಾಟ್ರಸ್’ಗೆ ನುಗ್ಗಿ ಭಯ ಹುಟ್ಟಿಸಿದ್ದಾನೆ. ಮೂವರು ಯುವತಿಯರು ವಾಸವಿದ್ದ ಕ್ವಾಟ್ರಸ್’ಗೆ ನುಗ್ಗಿ ಈ ಸೈಕೋಪಾತ್ ವಿಚಿತ್ರವಾಗಿ ವರ್ತಿಸಿದ್ದಾನೆ.
ಜನವರಿ 10ನೇ ತಾರಿಕು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕ್ವಾಟ್ರಸ್’ಗೆ ನುಗ್ಗಿರುವುದು ಇದೀಗ ಬೆಳಕಿಗೆ ಬಂದಿದೆ.
ಯುವತಿಯರು ಮಲಗಿದ್ದಾಗ ಅವರ ಬಳಿ ದೆವ್ವದಂತೆ ಕತ್ತಲ ಕೋಣೆಯಲ್ಲಿ ಚಾಕು ಹಿಡಿದು ನಿಂತಿದ್ದ. ಈ ವೇಳೆ ಆ ಮೂವರು ಯುವತಿಯರು ಆತನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ತಾನು ವಾಚ್’ಮನ್ ಎಂದು ಹೇಳಿಕೊಂಡಿದ್ದು, ನಂತರ ತಾನು ಕಳ್ಳ ಎಂದು ಹೇಳಿದ್ದಾನೆ. ಅಲ್ಲದೇ ಈ ವೇಳೆ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ಅಸಹ್ಯವಾಗಿ ವರ್ತಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.