
ನವದೆಹಲಿ(ಮೇ.02): ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ವೆಬ್ಸೈಟ್ ಹ್ಯಾಕ್ ಆಗಿದ್ದು 2.7 ಕೋಟಿ ಸದಸ್ಯರ ಮಾಹಿತಿ ಕಳವಾಗಿರುವ ಆತಂಕ ಎದುರಾಗಿದೆ.
ವೆಬ್'ಸೈಟ್ನಲ್ಲಿರುವ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಆಧಾರ್ ಜೋಡಣೆಯ ವೆಬ್ಪೋರ್ಟಲ್ಗೆ ಕನ್ನ ಹಾಕಲಾಗಿದೆ. ಈ ಕುರಿತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಇಪಿಎಫ್ಒ ಆಯುಕ್ತರು ಪತ್ರ ಬರೆದಿದ್ದು ಪೋರ್ಟಲ್ನ ದೋಷಗಳನ್ನು ಸರಿಪಡಿಸಲು ತಾಂತ್ರಿಕ ತಂಡದ ನೆರವು ಕೋರಿದ್ದಾರೆ.
2017ರ ಏಪ್ರಿಲ್ನಿಂದ 2018ರ ಜನವರಿ ವರೆಗೆ ಸರ್ಕಾರಿ ವಲಯದ 114 ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿರುವುದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೆಲ ತಿಂಗಳ ಹಿಂದೆ ಲೋಕಸಭೆಗೆ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.