ಶಬರಿಮಲೆ ಮಹಿಳೆ ಪ್ರವೇಶ: ಪ್ಲ್ಯಾನ್ ಸಿ ಅಂದ್ರೆ ರಕ್ತಪಾತ ಎಂದ ರಾಹುಲ್!

Published : Oct 25, 2018, 01:23 PM IST
ಶಬರಿಮಲೆ ಮಹಿಳೆ ಪ್ರವೇಶ: ಪ್ಲ್ಯಾನ್ ಸಿ ಅಂದ್ರೆ ರಕ್ತಪಾತ ಎಂದ ರಾಹುಲ್!

ಸಾರಾಂಶ

ಶಬರಿಮಲೆ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ! ಮಹಿಳೆ ಪ್ರವೇಶವಾಗಿದ್ದರೆ ಭಕ್ತರು ರಕ್ತಪಾತ ನಡೆಸುತ್ತಿದ್ದರು! ಶಬರಿಮಲೆ ಹೋರಾಟಗಾರ ರಾಹುಲ್ ಈಶ್ವರ್ ವಿವಾದಾತ್ಮಕ ಹೇಳಿಕೆ! ಪ್ಲ್ಯಾನ್ ಎ, ಪ್ಯ್ಲಾನ್ ಸಿ ಯೋಜನೆ ಅನುಷ್ಠಾನವಾಗುತ್ತಿತ್ತು! ನಮ್ಮ ನಂಬಿಕೆ ಮೇಲೆ ದಾಳಿ ನಡೆದರೆ ರಕ್ತಪಾತ ಖಚಿತ

ತಿರುವನಂತಪುರಂ(ಅ.25): ಶಬರಿಮಲೆ ಬೆಟ್ಟದ ಮೇಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಅರೋಪದ ಮೇಲೆ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹೋರಾಟಗಾರ ರಾಹುಲ್ ಈಶ್ವರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದೇ ಆದಲ್ಲಿ ಹೋರಾಟಗಾರರು ರಕ್ತಪಾತ ಮಾಡಲು ತಯಾರಿ ನಡೆಸಿದ್ದರು ಎಂದು ರಾಹುಲ್ ಈಶ್ವರ್ ಹೇಳಿಕೆ ನೀಡಿದ್ದಾರೆ.

ಅಯ್ಯಪ್ಪ ಭಕ್ತರ ನಂಬಿಕೆ ಮತ್ತು ಸಂಪ್ರದಾಯವನ್ನು ಯಾರಾದರೂ ಪ್ರಶ್ನಿಸಿದ್ದರೆ, ಭಕ್ತರು ರಕ್ತಪಾತ ನಡೆಸಲು ಸಿದ್ಧತೆ ನಡೆಸಿದ್ದರು ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.

ಶಬರಿಮಲೆಗೆ ಮಹಿಳೆಯರು ಬರದಂತೆ ತಡೆಯಲು ನಮ್ಮ ಬಳಿ ಹಲವು ಯೋಜನೆಗಳಿದ್ದು, ಈಗಾಗಲೇ ಪ್ಲ್ಯಾನ್ ಎ ಯಶಸ್ವಿಯಾಗಿದೆ. ಒಂದು ವೇಳೆ ಮೊದಲ ಹಂತದ ಯೋಜನೆ ವಿಫಲಗೊಂಡಿದ್ದರೆ ಪ್ಲ್ಯಾನ್ ಬಿ ಮತ್ತು ಪ್ಲ್ಯಾನ್ ಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು ಎಂದು ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ
Delhi Air Quality: ನಿಬಂಧನೆಗಳು ಜಾರಿಯಲ್ಲಿದ್ರೂ ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ