
ಬೆಂಗಳೂರು(ಜ. 03): ಚಿಕ್ಕಮಗಳೂರಿನಲ್ಲಿ ಇಂದು ವಿಧಿವಶರಾದ ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರು ರಾಜ್ಯ ಕಂಡ ಸಜ್ಜನ ಹಾಗೂ ಉತ್ತಮ ರಾಜಕಾರಣಿಗಳಲ್ಲೊಬ್ಬರು. ಇವರ ವೈಯಕ್ತಿಕ ಹಾಗೂ ಸಾರ್ವಜನಿಕ ಸೇವೆಯ ಪ್ರೊಫೈಲ್ ಇಲ್ಲಿದೆ.
* ಹುಟ್ಟಿದ್ದು : 1958, ಆಗಸ್ಟ್ 5
* ಊರು: ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಆಲಹಳ್ಳಿ ಗ್ರಾಮ
* ಕುಟುಂಬ: ತಂದೆ ಹೆಚ್.ಎನ್.ಶ್ರೀಕಂಠ ಶೆಟ್ಟಿ, ಪತ್ನಿ ಗೀತಾ ಹಾಗೂ ಮಗ ಗಣೇಶ್ ಪ್ರಸಾದ್
* ವಿದ್ಯಾಭ್ಯಾಸ: ಮೈಸೂರು ವಿವಿಯಿಂದ ರಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
* ಮೊದಲ ಚುನಾವಣೆ: 1989ರಲ್ಲಿ (ಆಗ ಸೋತಿದ್ದರು)
* 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು.
* ಒಟ್ಟು 5 ಬಾರಿ ಗುಂಡ್ಲುಪೇಟೆ ಪ್ರತಿನಿಧಿಸಿದ್ದಾರೆ.
* ಕಾಂಗ್ರೆಸ್'ನಿಂದ 2 ಬಾರಿ ಶಾಸಕರು
* ಜನತಾದಳ, ಜೆಡಿಎಸ್ ಹಾಗೂ ಜೆಡಿಯುನಿಂದ ತಲಾ ಒಂದೊಂದು ಬಾರಿ ಶಾಸಕರಾಗಿದ್ದರು.
* ಮೂರು ಬಾರಿ ಸಚಿವ. ಕನ್ನಡ ಮತ್ತು ಸಂಸ್ಕೃತಿ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಹಾಗೂ ಸಹಕಾರಿ ಸಚಿವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.