ಮಹಿಳಾ ಸಬಲೀಕರಣಕ್ಕೆ ಪ್ರಿಯಾಂಕ ಉಪೇಂದ್ರ ಐಡಿಯಾಗಳು

Published : Mar 08, 2018, 09:55 AM ISTUpdated : Apr 11, 2018, 01:11 PM IST
ಮಹಿಳಾ ಸಬಲೀಕರಣಕ್ಕೆ ಪ್ರಿಯಾಂಕ ಉಪೇಂದ್ರ ಐಡಿಯಾಗಳು

ಸಾರಾಂಶ

ಮಹಿಳಾ ಕಲ್ಯಾಣಕ್ಕೆ ಪ್ರಿಯಾಂಕಾ ಉಪೇಂದ್ರ ಹೇಳಿದ ಐದು ಐಡಿಯಾಗಳು

ಮಹಿಳಾ ಕಲ್ಯಾಣಕ್ಕೆ ಪ್ರಿಯಾಂಕಾ ಉಪೇಂದ್ರ ಹೇಳಿದ ಐದು ಐಡಿಯಾಗಳು

1. ಮಹಿಳೆಯರಿಗಾಗಿ ಆಗಬೇಕಾಗಿರುವ ಬದಲಾವಣೆಗಳು ಸಾಕಷ್ಟಿವೆ. ನನ್ನ ಪ್ರಕಾರ
ಮೊದಲು ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು. ಮಹಿಳೆಯರು ಎಲ್ಲಾ ಕಡೆ ಭಯ ಮುಕ್ತವಾಗಿ ಓಡಾಡಬೇಕು. ಅದಕ್ಕಾಗಿ  ಪ್ರಾಥಮಿಕ ಶಾಲೆಗಳ ಮಟ್ಟದಲ್ಲೇ ಸ್ವ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ವಿಶೇಷ ಕೋರ್ಸ್
ಪ್ರಾರಂಭ ಮಾಡುತ್ತೇನೆ.

2.  ನಾನು ಮೊದಲಿನಿಂದಲೂ ಬೇರೆ ಬೇರೆ ದೇಶಗಳನ್ನು ಕಂಡಿದ್ದೇನೆ. ಅಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳಿವೆ. ಅವೆಲ್ಲವನ್ನೂ ರಾಜ್ಯದಲ್ಲಿ ಜಾರಿಗೆ ತರುತ್ತೇನೆ. ಈಗ ಕಾನೂನುಗಳು ಇಲ್ಲವೆಂದಲ್ಲ. ಆದರೆ ಅವ್ಯಾವುಗಳೂ ಸರಿಯಾಗಿ ಜಾರಿಗೆ ಬರುತ್ತಿಲ್ಲ. ನಾನು ಮೊದಲಿಗೆ ಇರುವ ಕಾನೂನುಗಳ ಜೊತೆಗೆ ಮತ್ತಷ್ಟು ಕಠಿಣ ಕಾನೂನುಗಳನ್ನು  ತಂದು ಪ್ರತಿ ಹೆಣ್ಣಿಗೂ ಸೌಲಭ್ಯ ತಲುಪುವಂತೆ ಮಾಡುತ್ತೇನೆ.

3.  ಹೆಣ್ಣು ಭ್ರೂಣ ಹತ್ಯೆ ಇಂದಿಗೂ ನಡೆಯುತ್ತಲೇ ಇದೆ. ಇದರ ಬಗ್ಗೆ ಇರುವ ಕಾನೂನು ಇನ್ನೂ ಬಿಗಿಯಾಗಬೇಕು. ಹೆಣ್ಣು ಮಗು ಎನ್ನುವ ಕಾರಣಕ್ಕೆ ರಸ್ತೆ ಬದಿಯಲ್ಲಿ ಹೆಣ್ಣು ಮಗುವನ್ನು  ಬಿಸಾಕಿ ಹೋಗುವುದನ್ನೂ ನಾನು ಕಂಡಿದ್ದೇನೆ. ಅದೆಲ್ಲಕ್ಕೂ ಕಡಿವಾಣ ಹಾಕುತ್ತೇನೆ. ಮಹಿಳೆಯರಿಗೆ ಮನೆ, ಉಚಿತ ವೈದ್ಯಕೀಯ  ಸೌಲಭ್ಯ ನೀಡಲು ಎಲ್ಲಾ ಕ್ರಮ  ಕೈಗೊಳ್ಳುತ್ತೇನೆ.

4.  ಮಹಿಳೆಯರಿಗೆ ಆರ್ಥಿಕ ಭದ್ರತೆ,  ಶೈಕ್ಷಣಿಕವಾಗಿ ಮುಂದೆ ತರುವಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಇಂದಿಗೂ ಸಾಕಷ್ಟು ಶಾಲೆಗಳಲ್ಲಿ ವ್ಯವಸ್ಥಿತವಾದ ಶೌಚಾಲಯಗಳಿಲ್ಲ. ಇದರಿಂದ
ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಈ ರೀತಿಯ ಮೂಲ ಸಮಸ್ಯೆಗಳನ್ನು ಇಟ್ಟುಕೊಂಡು ಮಹಿಳಾ ಸಬಲೀಕರಣವನ್ನು ಬೇರು ಮಟ್ಟದಿಂದಲೇ ಪ್ರಾರಂಭಿಸುತ್ತೇನೆ.

5.  ಇನ್ನು ನಮ್ಮ ಸಮಾಜದಲ್ಲಿ  ಸಾಮಾನ್ಯವಾಗಿರುವ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ಎಲ್ಲವನ್ನೂ ಸಂಪೂರ್ಣವಾಗಿ ತೊಡೆದುಹಾಕುತ್ತೇನೆ. ನನ್ನ ಪ್ರಕಾರ ನಮ್ಮ ಮಹಿಳೆಯರಿಗೆ ಏನು ಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಂತರ ಕಾಲಕ್ಕೆ  ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸುತ್ತಾ ಸಾಗಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ