ಭಾರತದ ಪ್ರಥಮ ಪ್ರಜೆ ಯಾರು: ಇಂದು ಸಂಜೆ 5ಕ್ಕೆ ಬಹಿರಂಗ

Published : Jul 20, 2017, 12:00 AM ISTUpdated : Apr 11, 2018, 01:12 PM IST
ಭಾರತದ ಪ್ರಥಮ ಪ್ರಜೆ ಯಾರು: ಇಂದು ಸಂಜೆ 5ಕ್ಕೆ ಬಹಿರಂಗ

ಸಾರಾಂಶ

ಬಳಿಕ ರಾಜ್ಯಗಳ ಇಂಗ್ಲಿಷ್ ವರ್ಣಮಾಲೆಯ ಆರಂಭದ ಅಕ್ಷರ ಆಧರಿಸಿ ಮತ ಎಣಿಕೆ ನಡೆಯಲಿದೆ. ಒಟ್ಟು 8 ಸುತ್ತಿನ ಮತ ಎಣಿಕೆ ಇದ್ದು, ಪ್ರತಿ ಸುತ್ತಿನ ಮುನ್ನಡೆ-ಹಿನ್ನಡೆಗಳನ್ನೂ ಬಹಿರಂಗಪಡಿಸಲಾಗುತ್ತದೆ. ಸಂಜೆ 5ರ ಸುಮಾರಿಗೆ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾಧಿಕಾರಿಯೂ ಆದ ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ತಿಳಿಸಿದ್ದಾರೆ.

ನವದೆಹಲಿ(ಜು.19): ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ೧೧ ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು,  ಸಂಜೆ 5 ಗಂಟೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.

ಮೇಲ್ನೋಟಕ್ಕೆ ಕಂಡಂತೆ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರು ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಸಾಕಷ್ಟು ಮುಂದಿದ್ದು, ಜಯ ನಿಚ್ಚಳ ಎಂದು ಭಾವಿಸಲಾಗಿದೆ. ಒಟ್ಟು 4 ಟೇಬಲ್‌ಗಳನ್ನು ಸ್ಥಾಪಿಸಲಾಗಿದ್ದು, ಮೊದಲು ಸಂಸತ್ ಭವನದ ಮತಗಟ್ಟೆಯ, ಮತಗಳ ಎಣಿಕೆ ನಡೆಯಲಿದೆ. ಬಳಿಕ ರಾಜ್ಯಗಳ ಇಂಗ್ಲಿಷ್ ವರ್ಣಮಾಲೆಯ ಆರಂಭದ ಅಕ್ಷರ ಆಧರಿಸಿ ಮತ ಎಣಿಕೆ ನಡೆಯಲಿದೆ. ಒಟ್ಟು 8 ಸುತ್ತಿನ ಮತ ಎಣಿಕೆ ಇದ್ದು, ಪ್ರತಿ ಸುತ್ತಿನ ಮುನ್ನಡೆ-ಹಿನ್ನಡೆಗಳನ್ನೂ ಬಹಿರಂಗಪಡಿಸಲಾಗುತ್ತದೆ. ಸಂಜೆ 5ರ ಸುಮಾರಿಗೆ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾಧಿಕಾರಿಯೂ ಆದ ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ತಿಳಿಸಿದ್ದಾರೆ.

ಶೇ.99 ದಾಖಲೆಯ ಮತದಾನ

ಶೇ.99ರಷ್ಟು ದಾಖಲೆಯ ಮತದಾನ ಈ ಸಲ ನಡೆದಿದೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಅರ್ಹರಿರುತ್ತಾರೆ. ಆಯಾ ರಾಜ್ಯಗಳ ಜನಸಂಖ್ಯೆ ಆಧರಿಸಿ ಪ್ರತಿ ಮತದ ಮೌಲ್ಯ ನಿರ್ಧಾರವಾಗುತ್ತದೆ. ಇನ್ನು ಸಂಸದರ 1 ಮತಕ್ಕೆ 708 ಮತಗಳ ಮೌಲ್ಯ ಇರುತ್ತದೆ.

ಈ ಸಲ ಅರ್ಹ 771 ಸಂಸದರಲ್ಲಿ 768 ಸಂಸದರು ಮತ ಹಾಕಿದ್ದರು. ಇನ್ನು ಅರ್ಹ 4109 ಶಾಸಕರಲ್ಲಿ 4083 ಶಾಸಕರು ಮತ ಚಲಾಯಿಸಿದ್ದರು. ಅಂದಾಜಿನ ಪ್ರಕಾರ ರಾಮನಾಥ ಕೋವಿಂದ್ ಶೇ.63 ಸದಸ್ಯರ ಬೆಂಬಲ ಹೊಂದಿದ್ದು, ಜಯ ನಿಶ್ಚಿತವಾಗಿದೆ.

25ಕ್ಕೆ ಪ್ರಮಾಣ: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದೆ. ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಬಕಾರಿ ಭ್ರಷ್ಟಾಚಾರ: ಲೋಕಾಯುಕ್ತದಿಂದ ಜೈಲು ಸೇರಿರುವ ಅಧಿಕಾರಿಗಳ ಬ್ಯಾಂಕ್ ಖಾತೆ ಪರಿಶೀಲನೆ, ಹೆಚ್ಚು ನಗದು ಹಣ ಪಡೆದಿರೋ ಶಂಕೆ
ಶಿಡ್ಲಘಟ್ಟ ಪೌರಾಯುಕ್ತೆ ಆಯ್ತು, ಈಗ ಸಿಎಂ ತವರಲ್ಲೇ ಮಹಿಳಾ ಅಧಿಕಾರಿ ತಲೆ ತೆಗೆಯುತ್ತೇನೆಂದ ಕಿಡಿಗೇಡಿಗಳು!