
ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲ, ಈ ನಡುವೆ ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಚರ್ಚೆ ವ್ಯಾಪವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಲು ರಾಜಕೀಯ ಪಕ್ಷಗಳಿಗೆ ತಂತ್ರಗಾರಿಕೆ ರೂಪಿಸುವ ಪ್ರಶಾಂತ್ ಕಿಶೋರ್ ಸಮೀಕ್ಷೆ ಹಮ್ಮಿಕೊಂಡಿದ್ದಾರೆ. ಆ ಸಮೀಕ್ಷೆಯಲ್ಲಿಮಾಜಿ ಪ್ರಧಾನಿ ದೇವೇಗೌಡ ಕೂಡಾ ಇದ್ದಾರೆ.
ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪ್ಯಾಕ್) ಈ ಸಮೀಕ್ಷೆಗಾಗಿ ಆನ್ಲೈನ್ ವೇದಿಕೆ ಸಿದ್ಧಪಡಿಸಿದೆ. ನ್ಯಾಶನಲ್ ಅಜೆಂಡಾ ಫೋರಂ ವೆಬ್ಸೈಟ್ಗೆ ಲಾಗಿನ್ ಆಗಿ, ಅಲ್ಲಿ ನೀಡಲಾದ 10 ಅಂಶಗಳಲ್ಲಿ ಯಾವ ವಿಷಯಗಳನ್ನು ಆದ್ಯತೆಯ ಆಧಾರದಲ್ಲಿ ಪರಿಹರಿಸಬೇಕು ಎಂದು ಮತದಾನ ಮಾಡಬೇಕು.
ಅದರ ಜೊತೆಗೆ ಈ ಎಲ್ಲ ವಿಷಯಗಳನ್ನು ಯಾರು ಪರಿಹರಿಸಬಲ್ಲರು ಎಂಬ ಆಧಾರದಲ್ಲಿ ತಮ್ಮ ಆಯ್ಕೆಯ ಮುಂದಿನ ಪ್ರಧಾನಿಗೆ ಮತದಾನ ಮಾಡಬಹುದು. ಆ. 14 ಕ್ಕೆ ಮತದಾನ ಅಂತ್ಯವಾಗಲಿದ್ದು, ಆ. 15 ರಂದು ಫಲಿತಾಂಶ ಪ್ರಕಟವಾಗಲಿದೆ. ದೇವೇಗೌಡ, ಅಖಿಲೇಶ್, ಕೇಜ್ರಿವಾಲ್, ಮಮತಾ, ಮಾಯಾವತಿ, ಮೋದಿ, ನವೀನ್ ಪಾಟ್ನಾಯಕ್, ನಿತೀಶ್, ರಾಹುಲ್, ಶರದ್ ಪವಾರ್, ಯೆಚೂರಿ ಮೊದಲಾದವರ ಹೆಸರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.