ಕಾವಿ ತೊಟ್ಟೇ ಶ್ರೀಗಳು ಹಸೆಮಣೆ ಏರಿದ್ದು ವಿಶೇಷವಾಗಿತ್ತು. ಕಾವಿ ತೊಟ್ಟು ಮದುವೆಯಾಗಬಹುದಾ..? ಎಂಬ ಹೊಸ ಚರ್ಚೆಗೆ ಪ್ರಣವಾನಂದರು ನಾಂದಿ ಹಾಡಿದ್ದಾರೆ.
ಕಲಬುರಗಿ(ನ.07): ಚುನಾವಣೆಗೆ ಸ್ಪರ್ಧಿಸಿ ಜನಸೇವೆ ಮಾಡ್ತೀವಿ ಎಂದಿದ್ದ ಪ್ರಣವಾನಂದ ಸ್ವಾಮೀಜಿ ಸನ್ಯಾಸತ್ವ ತ್ಯಜಿಸಿ ಸಂಸಾರಿಯಾಗಿದ್ದಾರೆ. ಕೇರಳ ಮೂಲದ ಮೀರಾ ಎಂಬ ಯುವತಿಯನ್ನ ಪ್ರಣವಾನಂದ ಶ್ರೀ ವರಿಸಿದ್ದಾರೆ.ಕಲಬುರಗಿಯ ಶರಣಬಸವೇಶ್ವರ ದೇಗುಲದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು. ನಾಡಿನ ಹಲವು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾವಿ ತೊಟ್ಟೇ ಶ್ರೀಗಳು ಹಸೆಮಣೆ ಏರಿದ್ದು ವಿಶೇಷವಾಗಿತ್ತು. ಕಾವಿ ತೊಟ್ಟು ಮದುವೆಯಾಗಬಹುದಾ..? ಎಂಬ ಹೊಸ ಚರ್ಚೆಗೆ ಪ್ರಣವಾನಂದರು ನಾಂದಿ ಹಾಡಿದ್ದಾರೆ.