ಆಧಾರ್, ದಾಖಲೆ ಪತ್ರಗಳನ್ನು ವಿತರಿಸದೆ ಮಣ್ಣಿನಲ್ಲಿ ಹೂತಿಟ್ಟ ಅಂಚೆ ಇಲಾಖೆ ನೌಕರ!

Published : Jul 12, 2017, 12:38 PM ISTUpdated : Apr 11, 2018, 12:56 PM IST
ಆಧಾರ್, ದಾಖಲೆ ಪತ್ರಗಳನ್ನು ವಿತರಿಸದೆ ಮಣ್ಣಿನಲ್ಲಿ ಹೂತಿಟ್ಟ ಅಂಚೆ ಇಲಾಖೆ ನೌಕರ!

ಸಾರಾಂಶ

ಚಾಮರಾಜನಗರದಲ್ಲಿ ಅಂಚೆ ಇಲಾಖೆ ನೌಕರ ಆಧಾರ್ ಕಾರ್ಡ್ ಸೇರಿದಂತೆ ಇತರೆ ನೂರಾರು ದಾಖಲೆಗಳು, ಪತ್ರಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ಪ್ರಕರಣ ಬಯಲಾಗಿದೆ.

ಚಾಮರಾಜನಗರ(ಜು.12): ಚಾಮರಾಜನಗರದಲ್ಲಿ ಅಂಚೆ ಇಲಾಖೆ ನೌಕರ ಆಧಾರ್ ಕಾರ್ಡ್ ಸೇರಿದಂತೆ ಇತರೆ ನೂರಾರು ದಾಖಲೆಗಳು, ಪತ್ರಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದ ಪ್ರಕರಣ ಬಯಲಾಗಿದೆ.

ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಪೋಸ್ಟ್'ಮ್ಯಾನ್ ನಾಗರಾಜ್ ಎಂಬಾತ ಅಂಚೆಚೀಟಿಗಳನ್ನು ವಿತರಿಸದೆ ಮಣ್ಣಿನಲ್ಲಿ ಹೂತ್ತಿಟ್ಟಿದ್ದಾನೆ. ಅಂಚೆ ಕಚೇರಿ ಮುಂಭಾಗದ ನಿವೇಶನವೊಂದರಲ್ಲಿ ಹೂತಿಟ್ಟಿದ್ದು, ನಿವೇಶನದ ಮಾಲೀಕ ಪಾಯ ತೆಗೆದಾಗ ಆಧಾರ್​ ಕಾರ್ಡ್​ಗಳು ಸಿಕ್ಕಿವೆ.  

ಪೋಸ್ಟ್ ಮ್ಯಾನ್ ನಾಗರಾಜ್ 2013 ರಿಂದಲೂ ಸಾರ್ವಜನಿಕರಿಗೆ ನೂರಾರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಸರ್ಕಾರಿ ಕಚೇರಿಗೆ ಬಂದಿರುವ ಪತ್ರಗಳನ್ನು ವಿತರಿಸಿಲ್ಲ. ನಿರ್ಲಕ್ಷ್ಯ ಎಸಗಿರುವ ಪೋಸ್ಟ್ ಮ್ಯಾನ್ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಪೋಸ್ಟ್ ಮ್ಯಾನ್ ಮಾಡಿದ ಎಡವಟ್ಟಿನಿಂದ ಲೊಕ್ಕನಹಳ್ಳಿ, ಕೌಳ್ಳಿಹಳ್ಳ ಡ್ಯಾಂ, ಬೋರೆದೊಡ್ಡಿ, ಜಡೇಸ್ವಾಮಿದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?