ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರ ನೇಮಕ?

Published : Oct 03, 2017, 07:39 PM ISTUpdated : Apr 11, 2018, 12:41 PM IST
ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರ ನೇಮಕ?

ಸಾರಾಂಶ

ಇತಿಹಾಸ ನಿರ್ಮಿಸೋ ಒಂದು ಉತ್ತಮ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದೆ. ಸಿಎಂ ಮನಸ್ಸು ಮಾಡಿದರೆ ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರು ನೇಮಕಗೊಳ್ಳುವ ಅವಕಾಶವಿದೆ.

ಬೆಂಗಳೂರು (ಅ. 03): ಇತಿಹಾಸ ನಿರ್ಮಿಸೋ ಒಂದು ಉತ್ತಮ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿದೆ. ಸಿಎಂ ಮನಸ್ಸು ಮಾಡಿದರೆ ರಾಜ್ಯ ಸರ್ಕಾರದ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳೆಯರು ನೇಮಕಗೊಳ್ಳುವ ಅವಕಾಶವಿದೆ.

ಒಂದು ರಾಜ್ಯ ಸರ್ಕಾರದ ಮುಖ್ಯಕಾಯದರ್ಶಿ ಹುದ್ದೆ ಮತ್ತೊಂದು ಪೊಲೀಸ್ ಮಹಾ ನಿರ್ದೇಶಕರ ಹುದ್ದೆ. ಹಾಲಿ ಈಗಿರುವ ಮುಖ್ಯ ಕಾರ್ಯದರ್ಶಿ  ಸುಭಾಷ್ ಚಂದ್ರ ಕುಂಟಿಯಾ ಅವರು ಇದೇ ನವೆಂಬರ್ ಅಂತ್ಯಕ್ಕೆ ನಿವೃತ್ತರಾಗಲಿದ್ದು, ಮುಂದಿನ ಸಿಎಸ್ ಯಾರು ಅನ್ನೋ ಬಗ್ಗೆ ಕುತೂಹಲ ನಿರ್ಮಾಣವಾಗಿದೆ. ಕುಂಟಿಯಾ ಕೇಂದ್ರ ಸೇವೆಯಿಂದ ಅನಿರೀಕ್ಷಿತವಾಗಿ ರಾಜ್ಯ ಸೇವೆಗೆ ವಾಪಸ್ಸಾದಂತೆ ಮತ್ಯಾರು ಬರದಿದ್ದರೆ ಹಾಲಿ ಅಪರ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹಾಗೂ ಅಭಿವೃದ್ಧಿ ಆಯುಕ್ತ ಟಿ ಎಂ ವಿಜಯಭಾಸ್ಕರ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ಇನ್ನೂ ಇದೇ ತಿಂಗಳ ಅಂತ್ಯಕ್ಕೆ ಪೊಲೀಸ್ ಮಹಾನಿರ್ದೇಶಕ ಆರ್ ಕೆ ದತ್ತ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಅಗ್ನಿಶಾಮಕ ಡಿಜಿಪಿ ನೀಲಮಣಿ, ಎನ್ ರಾಜು, ಸಿಐಡಿ ಡಿಜಿಪಿ ಹೆಚ್ ಸಿ ಕಿಶೋರ ಚಂದ್ರ, ಎಸಿಬಿ ಡಿಜಿಪಿ ಎಂ ಎನ್ ರೆಡ್ಡಿ ರೇಸನಲ್ಲಿದ್ದಾರೆ. ಇದ್ರಲ್ಲಿ ಕೀಶೊರ್ ಚಂದ್ರ ಮತ್ತು ನೀಲಮಣಿ ಕನ್ನಡಿಗರಾಗಿದ್ದಾರೆ. ರಾಜ್ಯೋತ್ಸವದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕನ್ನಡಿಗರಿಗೆ ಆಧ್ಯತೆ ನೀಡ್ತಾರಾ ಸಿದ್ದರಾಮಯ್ಯ ಅನ್ನೋ ಕುತೂಹಲ ಮಣೆ ಮಾಡಿದೆ. ಒಂದು ವೆಳೆ, ಪ್ರಮುಖ ಎರಡು ಹುದ್ದೆಗಳನ್ನು ಮಹಿಳೆಯರಿಗೆ ನೀಡಿದ್ದೇ ಆದಲ್ಲಿ ಒಂದು ಇತಿಹಾಸ ನಿರ್ಮಿಸಿದ ಕೀರ್ತಿ ಸಿಎಂಗೆ ಬರಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ