ಚುನಾವಣೆಗಾಗಿ 100 ಎಕರೆ ಮಾರಿದ ಕರ್ನಾಟಕದ ಈ ರಾಜಕಾರಣಿ ! ?

Published : Mar 04, 2018, 10:31 AM ISTUpdated : Apr 11, 2018, 12:54 PM IST
ಚುನಾವಣೆಗಾಗಿ 100 ಎಕರೆ ಮಾರಿದ ಕರ್ನಾಟಕದ ಈ ರಾಜಕಾರಣಿ ! ?

ಸಾರಾಂಶ

ಕಳೆದ ಬಾರಿ ಪ್ರಾದೇಶಿಕ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಇವರು, ಈ ಬಾರಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿದ್ದು, ಜಿಲ್ಲೆಯ ರಾಜಕಾರಣಿಯೊಬ್ಬರು ಚುನಾವಣೆಗಾಗಿಯೇ ತಮ್ಮ 100 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಭರವಸೆಗಳ ಜೊತೆಗೆ ‘ಕನಕ’ವೃಷ್ಟಿಯನ್ನೇ ಹರಿಸಲಾಗುತ್ತಿದೆ. ಚುನಾವಣೆ ದಿನ ಇನ್ನೂ ಘೋಷಣೆಯಾಗದಿದ್ದರೂ ಶಾಸಕ‘ಗಿರಿ’ಗಾಗಿ ಭಾರಿ ಕಸರತ್ತು ನಡೆದಿದೆ. ಹೀಗಾಗಿ, ಚುನಾವಣೆಗೆ ಈ ರಾಜಕಾರಣಿ ತಮ್ಮ 100 ಎಕರೆ ಜಮೀನನ್ನು ಎಕರೆಗೆ ತಲಾ 6-15 ಲಕ್ಷ ರು.ನಂತೆ ಮಾರಾಟ ಮಾಡಿದ್ದಾರೆ. ಈ ಮೊತ್ತವೇ 12-15 ಕೋಟಿ ಆಗುತ್ತದೆ. ಈಗಾಗಲೇ 100 ಎಕರೆ ಜಮೀನು ಮಾರಾಟದ ವ್ಯವಹಾರ ಕುದುರಿದ್ದು, ಚುನಾವಣೆ ವೇಳೆ ಈ ಹಣವನ್ನು ಭೂಮಿ ಖರೀದಿಸಿರುವವರು ನೀಡಬೇಕೆಂಬ ಷರತ್ತು ಆಗಿದೆ.

ಈ ಹಣವನ್ನು ಚುನಾವಣೆ ವೇಳೆ ವೆಚ್ಚ ಮಾಡಲು ಆ ರಾಜಕಾರಣಿ ಸಜ್ಜಾಗಿದ್ದಾರೆ. ಈ ವಿಚಾರವೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಗೂ ಪೂರ್ವದಲ್ಲಿಯೇ ಆಸ್ತಿ ಮಾರಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಬಾರಿ ಪ್ರಾದೇಶಿಕ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಇವರು, ಈ ಬಾರಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಇವರಿದ್ದ ಪ್ರಾದೇಶಿಕ ಪಕ್ಷವೂ ಅದೇ ರಾಷ್ಟ್ರೀಯ ಪಕ್ಷದಲ್ಲಿ ವಿಲೀನವಾಗಿರುವುದರಿಂದ ಇವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಈ ಬಗ್ಗೆ ಬಹಿರಂಗ ವೇದಿಕೆಯಲ್ಲೇ ಘೋಷಣೆಯೂ ಆಗಿದೆ. ಹೀಗಾಗಿ, ಏನಾದರೂ ಆಗಲಿ ಈ ಬಾರಿ ಗೆಲ್ಲಲೇಬೇಕು ಎಂದು ಈಗಲೇ ಜಮೀನು ಮಾರಿದ್ದಾರೆ. ಈ 100 ಎಕರೆ ಜಮೀನಿನಲ್ಲಿ 70 ಎಕರೆ ಸ್ವಂತದ್ದಾಗಿದ್ದರೆ, ಉಳಿದ ಜಮೀನುಗಳು ಸಂಬಂಧಿಕರು, ಸ್ನೇಹಿತರಿಗೆ ಸೇರಿದವಾಗಿವೆ. ಕೊಪ್ಪಳದ ನೆರೆಯ ಜಿಲ್ಲೆಯವರೇ ಆಗಿರುವ ಅಭ್ಯರ್ಥಿಗೆ ಅಲ್ಲಿಯೇ ಈ ಆಸ್ತಿ ಇತ್ತು ಎನ್ನಲಾಗಿದೆ.

ಕುದುರೆ ವ್ಯಾಪಾರ: ಕೆಲವು ಮೂಲಗಳ ಪ್ರಕಾರ, ಈ ಕ್ಷೇತ್ರದಲ್ಲಿ ಹರಿಯುತ್ತಿರುವಷ್ಟು ಹಣದ ಹೊಳೆ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಹರಿದಾಡುತ್ತಿಲ್ಲ ಎನ್ನಲಾಗಿದ್ದು, ಈಗ ತಾವು ಜಮೀನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಯುವಕರು ಹಾಗೂ ಮುಂಚೂಣಿ ಮುಖಂಡರನ್ನು ಖರೀದಿಸುವ ಕುದುರೆ ವ್ಯಾಪಾರವನ್ನೂ ಜೋರಾಗಿಯೇ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದ ಹಲವಾರು ಅಭಿವೃದ್ಧಿ

- ಸೋಮರಡ್ಡಿ ಅಳವಂಡಿ, ಕೊಪ್ಪಳ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!