ಅಟಲ್ ಬಗ್ಗೆ ನೆಹರು ಭವಿಷ್ಯ ಕಡೆಗೂ ನಿಜವಾಯ್ತು!

Published : Aug 17, 2018, 11:28 AM ISTUpdated : Sep 09, 2018, 08:34 PM IST
ಅಟಲ್ ಬಗ್ಗೆ ನೆಹರು ಭವಿಷ್ಯ ಕಡೆಗೂ ನಿಜವಾಯ್ತು!

ಸಾರಾಂಶ

1948 ರ ಡಿಸೆಂಬರ್ 25 ರ ಕ್ರಿಸಮಸ್ ಹಬ್ಬದ ದಿನ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಗ್ವಾಲಿಯರ್ ಮತ್ತು ಕಾನ್ಪುರದಲ್ಲಿ.ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. 

ನವದೆಹಲಿ (ಆ. 17): 1948 ರ ಡಿಸೆಂಬರ್ 25 ರ ಕ್ರಿಸಮಸ್ ಹಬ್ಬದ ದಿನ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಗ್ವಾಲಿಯರ್ ಮತ್ತು ಕಾನ್ಪುರದಲ್ಲಿ.

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಅಟಲ್ ಬಿಹಾರಿ, 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಸೆರೆವಾಸ ಅನುಭವಿಸಿದರು. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ನೈಜ ರಾಜಕೀಯ ಜೀವನ ಆರಂಭವಾಗಿದ್ದು 1953 ರಲ್ಲಿ. ಹಿಂದಿ ಪತ್ರಿಕೆಯ ಪತ್ರಕರ್ತ ಪ್ರತಿನಿಧಿಯಾಗಿ ಶ್ಯಾಮಪ್ರಸಾದ್ ಮುಖರ್ಜಿ ಜೊತೆ ಕಾಶ್ಮೀರಕ್ಕೆ ತೆರಳಿದ ವಾಜಪೇಯಿ ಅವರು ಮುಖರ್ಜಿ ಬಂಧನದ ನಂತರ ಅಲ್ಲಿಂದ ಬರುವಾಗಲೇ ಇನ್ನುಮುಂದೆ ತನ್ನ ಜೀವನ ರಾಜಕೀಯದಲ್ಲಿ ಎಂದು ತೀರ್ಮಾನಿಸಿ ಬಂದಿದ್ದರು.

1957 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆರಿಸಿ ಬಂದ ವಾಜಪೇಯಿ ದಾಖಲೆಯ 9 ಬಾರಿ ಲೋಕಸಭೆ ಮತ್ತು 2 ಬಾರಿ ರಾಜ್ಯಸಭೆಯಲ್ಲಿ ಅಚಲರಾಗಿ ಕಾರ್ಯನಿರ್ವಹಿಸಿದರು. ಅಟಲ್ ಬಿಹಾರಿ ಮೊದಲ ಬಾರಿ ಲೋಕಸಭೆಗೆ ಬಂದಾಗ ಮಾಡಿದ ಭಾಷಣ ಕೇಳಿ ಆನಂದಿತರಾದ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ.

ಆಗ ದೆಹಲಿಯಲ್ಲಿ ಅಶೋಕ ಎಂಬ ಪಂಚತಾರಾ ಹೋಟೆಲ್ಲನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿತ್ತು. ವಾಜಪೇಯಿ ಅವರು ನೆಹರುಗೆ ನೇರವಾಗಿ ಸದನದಲ್ಲಿ ಹೇಳಿದ್ದು ಸರ್ಕಾರದ ಕೆಲಸ ಪಂಚತಾರ ಹೋಟೆಲ್ ನಿರ್ಮಿಸುವುದಲ್ಲ, ಆಸ್ಪತ್ರೆ ನಿರ್ಮಿಸಿ ಎಂದು. ಆಗ ನೆಹರು ಹೋಟೆಲ್ ನಿರ್ಮಿಸಿ ಬಂದ ದುಡ್ಡಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸುತ್ತೇವೆ ಎಂದು ಹೇಳಿ ಸಮಾಧಾನ ಮಾಡಿದರಂತೆ. ಆಗಲೇ ಅಟಲ್‌ರ ಭಾಷಣ ಲೋಕಸಭೆಯಲ್ಲಿ ಸೂಪರ್ ಹಿಟ್.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ