ಕಲಬೆರೆಕೆ ಹಾಲು ಮಾರಾಟ; ಓರ್ವ ಪೊಲೀಸರ ವಶಕ್ಕೆ

By Suvarna Web DeskFirst Published Mar 19, 2017, 2:21 PM IST
Highlights

ಇನ್ಸಪೆಕ್ಟರ್ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಬಿದರಿ ಗ್ರಾಮದಲ್ಲಿರುವ ಹಾಲಿನ ಘಟಕವನ್ನು ಮುಟ್ಟುಗೋಲು ಹಾಕಿ, ಶಶಿಕಾಂತ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. 

ಬಾಗಲಕೋಟೆ (ಮಾ.19): ಬಾಗಲಕೋಟೆ ಜಿಲ್ಲಾ ಅಪರಾಧ ಪತ್ತೆ ದಳವು ಮಾರುವೇಷದಲ್ಲಿ ದಾಳಿ ಮಾಡಿ ಕಲಬೆರಕೆ ಹಾಲು ಮಾರಾಟ ಮಾಡುತ್ತಿದ್ದ ಘಟಕವನ್ನು ಮುಟ್ಟುಗೋಲು ಹಾಕಿದೆ.

ಇನ್ಸಪೆಕ್ಟರ್ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಬಿದರಿ ಗ್ರಾಮದಲ್ಲಿರುವ ಹಾಲಿನ ಘಟಕವನ್ನು ಮುಟ್ಟುಗೋಲು ಹಾಕಿ, ಶಶಿಕಾಂತ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. 

ನಾರಾಯಣ ಎಂಬವರಿಗೆ ಸೇರಿದ ಈ ಹಾಲಿನ ಘಟಕದಲ್ಲಿ ಹಾಲಿಗೆ ಕಾಸ್ಟಿಕ್ ಸೋಡಾ, ಕೆಮಿಕಲ್ ಬೆರೆಸಿ ಮಾರಾಟ ಮಾಡ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, 36 ಕ್ಯಾನ್ ಕಲಬೆರೆಕೆ ಹಾಲು ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ.

click me!