ಕುಡಿಯುವ ನೀರಿಗೆ ಬೋರ್'ವೆಲ್ ಕೊರೆಸಿದ ಅಧಿಕಾರಿಗಳು

Published : Mar 19, 2017, 01:09 PM ISTUpdated : Apr 11, 2018, 01:04 PM IST
ಕುಡಿಯುವ ನೀರಿಗೆ ಬೋರ್'ವೆಲ್ ಕೊರೆಸಿದ ಅಧಿಕಾರಿಗಳು

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಶಿವಮೊಗ್ಗ (ಮಾ.19): ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಲಕ್ಕಿನಕೊಪ್ಪ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್  ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಅದರೆ 2 ಬೋರ್'ವೆಲ್'ಗಳನ್ನು ಕೊರೆಯಿಸಿದರೂ ನೀರು ಬರಲಿಲ್ಲ. ಆದರೂ ಪ್ರಯತ್ನ ಬಿಡದ ಅಧಿಕಾರಿಗಳು ಗ್ರಾಮದ ಕೆರೆಯಂಗಳದಲ್ಲಿ ಮೂರನೇ ಬೋರ್'ವೊಂದನ್ನು ಕೊರೆಯಿಸುತ್ತಿದ್ದಂತೆ ಕೇವಲ 270 ಅಡಿ ಆಳದಲ್ಲಿ ನೀರು ಸಿಕ್ಕಿತು.

ಈ ಮೂಲಕ ಬಾಯಾರಿದ ಜನ - ಜಾನುವಾರುಗಳ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇದಕ್ಕೆಲ್ಲ ಕಾರಣವಾದ ಸುವರ್ಣನ್ಯೂಸ್'ನ ಪ್ರಯತ್ನಕ್ಕೆ ಗ್ರಾಮಸ್ಥರು ಹೃದಯತುಂಬಿ ಧನ್ಯವಾದಗಳನ್ನು ಅರ್ಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ