'ಒಬ್ಬಂಟಿಯಾಗಿ ಸಿಕ್ಕರೆ ಕಥೆ ಮುಗಿಸುವೆ' ದೂರು ನೀಡಲು ಬಂದವರಿಗೆ ಧಮ್ಕಿ ಹಾಕಿದ ಪೊಲೀಸಪ್ಪ!

Published : Nov 30, 2016, 05:29 AM ISTUpdated : Apr 11, 2018, 12:41 PM IST
'ಒಬ್ಬಂಟಿಯಾಗಿ ಸಿಕ್ಕರೆ ಕಥೆ ಮುಗಿಸುವೆ' ದೂರು ನೀಡಲು ಬಂದವರಿಗೆ ಧಮ್ಕಿ ಹಾಕಿದ ಪೊಲೀಸಪ್ಪ!

ಸಾರಾಂಶ

ಸಾಮಾನ್ಯವಾಗಿ ಜನರಿಗೆ ಏನೇ ಸಮಸ್ಯೆ ಬಂದರೂ ಪೋಲಿಸರು ತಮಗೆ ನ್ಯಾಯ ಒದಗಿಸುತ್ತಾರೆ ಎಂದು ಪೋಲಿಸ್ ಠಾಣೆ ಮೆಟ್ಟಿಲು ಏರುವುದು ಸಹಜ. ಆದರೆ ದೂರು ನೀಡಲು ಹೋದ ವ್ಯಕ್ತಿಗಳ ಮೇಲೆಯೇ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಡಿಕೇರಿಯಲ್ಲಿ ಕೇಳಿ ಬಂದಿದೆ. ಅಲ್ಲದೇ ಇನ್ಸ್​​​ಪೆಕ್ಟರ್​​​ ವಿರುದ್ಧ ಪೋಲಿಸ್ ವರಿಷ್ಟಾಧಿಕಾರಿಗೆ ದೂರು ನೀಡಲಾಗಿದೆ. ಮಡಿಕೇರಿ ತಾಲ್ಲೂಕು ನಾಪೋಕ್ಲು ಪೋಲಿಸ್ ಠಾಣೆಯ ಸಬ್'ಇನ್ಸ್​​​​ಪೆಕ್ಟರ್​​ ವೆಂಕಟೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಮಡಿಕೇರಿ(ನ.30): ಸಾಮಾನ್ಯವಾಗಿ ಜನರಿಗೆ ಏನೇ ಸಮಸ್ಯೆ ಬಂದರೂ ಪೋಲಿಸರು ತಮಗೆ ನ್ಯಾಯ ಒದಗಿಸುತ್ತಾರೆ ಎಂದು ಪೋಲಿಸ್ ಠಾಣೆ ಮೆಟ್ಟಿಲು ಏರುವುದು ಸಹಜ. ಆದರೆ ದೂರು ನೀಡಲು ಹೋದ ವ್ಯಕ್ತಿಗಳ ಮೇಲೆಯೇ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಡಿಕೇರಿಯಲ್ಲಿ ಕೇಳಿ ಬಂದಿದೆ. ಅಲ್ಲದೇ ಇನ್ಸ್​​​ಪೆಕ್ಟರ್​​​ ವಿರುದ್ಧ ಪೋಲಿಸ್ ವರಿಷ್ಟಾಧಿಕಾರಿಗೆ ದೂರು ನೀಡಲಾಗಿದೆ. ಮಡಿಕೇರಿ ತಾಲ್ಲೂಕು ನಾಪೋಕ್ಲು ಪೋಲಿಸ್ ಠಾಣೆಯ ಸಬ್'ಇನ್ಸ್​​​​ಪೆಕ್ಟರ್​​ ವೆಂಕಟೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಕಾವೇರಿ ನದಿ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಿ ಎಂದು ಸ್ಥಳೀಯರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ದೂರು ನೀಡಿದ್ದ ಮೋಯ್ದು ಎಂಬುವವರಿಗೆ ಇನ್ಸ್​​​​ಪೆಕ್ಟರ್​​ ಧಮ್ಕಿ ಹಾಕಿದ್ದಾರಂತೆ. ಒಬ್ಬಂಟಿಯಾಗಿ ಸಿಕ್ಕಿದರೆ ಕಥೆ ಮುಗಿಸಿ ಬಿಡುವುದಾಗಿ ಮೋಯ್ದು ಸಂಬಂಧಿಕರ ಬಳಿ ಹೇಳಿರುವ ಸಂಭಾಷಣೆ ಮೊಬೈಲ್ ನಲ್ಲಿ ರೆಕಾರ್ಡ್​ ಆಗಿದೆ.

ಅಂದಹಾಗೆ ಇನ್ಸ್​​​ಪೆಕ್ಟರ್​​ ವೆಂಕಟೇಶ್ ಗೆ ಹಣ ನೀಡದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಮತ್ತು ದೂರು ನೀಡಲು ಬಂದವರಿಗೆ ನಿಂದಿಸುತ್ತಾರೆ ಎನ್ನುವ ಆರೋಪವೂ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Thalapathy Vijay: ಯಾರ ಮುಂದೆಯೂ ಮಂಡಿಯೂರುವ ಮಾತೇ ಇಲ್ಲ: ದಳಪತಿ ವಿಜಯ್ ಖಡಕ್ ಎಚ್ಚರಿಕೆ
ವಿಜಯಪುರ: ಗಣರಾಜ್ಯೋತ್ಸ ವ ದಿನದಂದೇ ಚಿನ್ನದಂಗಡಿ ಲೂಟಿ, ಸಿನಿಮೀಯ ಶೈಲಿಯಲ್ಲಿ ಕಂಟ್ರಿ ಪಿಸ್ತೂಲ್ ತೋರಿಸಿ ದರೋಡೆ!