ಸಿಎಂ ಸಿದ್ದರಾಮಯ್ಯ ಟೀಕಿಸಿದ್ದ ಪೊಲೀಸ್ ಪೇದೆಗೆ ಅಮಾನತು ಶಿಕ್ಷೆ

Published : Nov 02, 2017, 05:25 PM ISTUpdated : Apr 11, 2018, 12:48 PM IST
ಸಿಎಂ ಸಿದ್ದರಾಮಯ್ಯ ಟೀಕಿಸಿದ್ದ ಪೊಲೀಸ್ ಪೇದೆಗೆ ಅಮಾನತು ಶಿಕ್ಷೆ

ಸಾರಾಂಶ

ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿ ಫೇಸ್'ಬುಕ್ ನಲ್ಲಿ ಸ್ಟೇಟಸ್ ಹಾಕಿ ವಿವಾದ ಸೃಷ್ಟಿ ಮಾಡಿದ್ದ ಪೇದೆ ರಾಜು ಶಿವಪ್ಪರವರನ್ನು ಇಲಾಖೆ ತನಿಖೆ ನಡೆಸಿ ಅಮಾನತು ಆದೇಶ ನೀಡಿರುವುದಾಗಿ ದ.ಕ. ಜಿಲ್ಲೆ ಎಸ್ಪಿ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.  

ಬೆಂಗಳೂರು (ನ.02): ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿ ಫೇಸ್'ಬುಕ್ ನಲ್ಲಿ ಸ್ಟೇಟಸ್ ಹಾಕಿ ವಿವಾದ ಸೃಷ್ಟಿ ಮಾಡಿದ್ದ ಪೇದೆ ರಾಜು ಶಿವಪ್ಪರವರನ್ನು ಇಲಾಖೆ ತನಿಖೆ ನಡೆಸಿ ಅಮಾನತು ಆದೇಶ ನೀಡಿರುವುದಾಗಿ ದ.ಕ. ಜಿಲ್ಲೆ ಎಸ್ಪಿ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.  

ಬೆಳ್ತಂಗಡಿ ಪೊಲೀಸ್ ಠಾಣೆ ಕಾನ್ಸ್'ಟೇಬಲ್ ರಾಜು ಶಿವಪ್ಪ ಅಮಾನತುಗೊಂಡ ವ್ಯಕ್ತಿ. "ಮೈಲಾರಿ ಕಂಡಾಗ ಸಿಡುಕಿನ ಮುಖ; ಮುಲ್ಲಾ ಕಂಡಾಗ ಅರಳಿದ ಮುಖ" ಎಂದು ಫೇಸ್'ಬುಕ್ ಸ್ಟೇಟಸ್ ಹಾಕಿದ್ದರು. ಜೊತೆಗೆ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ  ಸಿಎಂ ಸಿದ್ದರಾಮಯ್ಯ ಭೇಟಿ ಕುರಿತು ವಿಡಂಬನಾತ್ಮಕವಾಗಿ ಬರೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯರನ್ನು "ಸಿದ್ದು ಖಾನ್" ಎಂದು ಟೀಕಿಸಿದ್ದರು. ಕಾನ್ಸ್'ಟೇಬಲ್ ರಾಜು ವಿರುದ್ಧ ಯುವ ಕಾಂಗ್ರೆಸ್  ದೂರು ನೀಡಿತ್ತು. ಅವರನ್ನು ಇಂದು ಅಮಾನತುಗೊಳಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ