ನಂದಿನಿ ತುಪ್ಪ ಕಲಬೆರಕೆ ಮಾಡುತ್ತಿದ್ದವರ ಬಂಧನ

Published : Dec 13, 2017, 12:44 PM ISTUpdated : Apr 11, 2018, 01:02 PM IST
ನಂದಿನಿ ತುಪ್ಪ ಕಲಬೆರಕೆ ಮಾಡುತ್ತಿದ್ದವರ ಬಂಧನ

ಸಾರಾಂಶ

ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತಿದ್ದ ಅರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.  ಅಯ್ಯಪ್ಪಸ್ವಾಮಿ ಅಲಿಯಾಸ್ ಮಣಿ , ಮಾರುತಿ , ಶಿವಕುಮಾರ್, ಸುಕುಮಾರನ್  ಬಂಧಿತ ಅರೋಪಿಗಳು.

ಬೆಂಗಳೂರು (ಡಿ.13): ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತಿದ್ದ ಅರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.  ಅಯ್ಯಪ್ಪಸ್ವಾಮಿ ಅಲಿಯಾಸ್ ಮಣಿ , ಮಾರುತಿ , ಶಿವಕುಮಾರ್, ಸುಕುಮಾರನ್  ಬಂಧಿತ ಅರೋಪಿಗಳು.

ಆರೋಪಿಗಳು ನಂದಿನಿ ತುಪ್ಪ  ತಯಾರು ಮಾಡಲು ಹೈದರಾಬಾದ್'ನಿಂದ ಮಷಿನ್ ಖರೀದಿ ಮಾಡಿದ್ದರು. ನಂದಿನಿ ಬಾಕ್ಸ್'ನ ಚಿಹ್ನೆಯನ್ನು ತಮಿಳುನಾಡಿನ ಕೃಷ್ಣ ಗಿರಿಯಲ್ಲಿ ತಯಾರು ಮಾಡಿದ್ದರು.  ನಂತರ  ಪಾಂಡಿಚೆರಿಯಲ್ಲಿ ಪ್ರಿಂಟಿಂಗ್ ಮಾಡಿಸುತ್ತಿದ್ದರುನಂತರ ತುಪ್ಪವನ್ನು ತಯಾರು ಮಾಡಿ ಒಂದು ಟೆಂಪೊ ಟ್ರಾವೆಲರ್ ಮೂಲಕ ಸಾಗಿಸಿ ಮಾರಾಟ ಮಾಡುತ್ತಿದ್ದರು. ಟಿಟಿಯ ಸೀಟನ್ನು ಕಳಚಿಟ್ಟು ಅದರಲ್ಲಿ ತುಪ್ಪವನ್ನು ಸಾಗಾಟ ಮಾಡಿಸುತ್ತಿದ್ದರು.  ಸದ್ಯ 600-800 ಲೀಟರ್ ಕಲಬೆರಕೆ  ತುಪ್ಪವನ್ನು  ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಣಿ ಈ ಮೊದಲು ಲೋಕಲ್ ನ್ಯೂಡಲ್ಸ್ ತಯಾರು ಮಾಡುತ್ತಿದ್ದ. ನಂತರ  ನಂದಿನಿ ತುಪ್ಪಕ್ಕೆ ಒಳ್ಳೆಯ ಮಾರ್ಕೆಟಿಂಗ್ ಇದೆ ಎಂದು ನಂದಿನಿ ತುಪ್ಪ ತಯಾರಿಸುತಿದ್ದರು. ಅರೋಪಿಗಳು ತುಪ್ಪವನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತಿದ್ದರು.  ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಕಲಬೆರಕೆ ತುಪ್ಪವನ್ನು ರಾಜಕಾಲುವೆಗೆ ಸುರಿಯಲು ಆರೋಪಿ ಯತ್ನಿಸಿದ್ದಾನೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್
Hate Speech Bill: ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು