
ಸೂರತ್[ಮೇ.21]: ಮಹಾತ್ಮಾ ಗಾಂಧೀಜಿ ಹಂತಕ ನಾಥುರಾಮ್ ಗೋಡ್ಸೆ ಜಯಂತಿ ಆಚರಣೆ ಮಾಡಿದ ಆಪಾದನೆ ಮೇರೆಗೆ ಹಿಂದೂ ಮಹಾಸಭಾದ 6 ಕಾರ್ಯಕರ್ತರನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ.
ಸೂರತ್ ಜಿಲ್ಲೆಯ ಲಿಂಬ್ಯಾಯಾತ್ ಎಂಬಲ್ಲಿರುವ ಸೂರ್ಯಮುಖಿ ಹನುಮಂತನ ದೇಗುಲದ ಆವರಣದಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಡ್ಸೆ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಗೋಡ್ಸೆ ಫೋಟೋಗೆ ದೀಪ ಬೆಳಗಿಸಿ ಸಿಹಿ ಹಂಚುತ್ತಿದ್ದ ಹಿಂದು ಮಹಾಸಭಾದ 6 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ತಿಳಿಸಿದ್ದಾರೆ.
ಈ ಆಚರಣೆಗೆ ಸ್ಪಷ್ಟನೆ ನೀಡಿರುವ ಕಾರ್ಯಕರ್ತರೊಬ್ಬರು 'ನಾವು ಗೋಡ್ಸೆ ಜನ್ಮ ದಿನವನ್ನು ಆಚರಿಸಿದ್ದೇವೆ, ನಾವೇನು ತಪ್ಪು ಮಾಡಿಲ್ಲ. ಗಾಂಧೀಜಿ ಕುರಿತು ಅಭಿಮಾನ ಹೊಂದಿರುವ ಜನರಂತೆ ನಮಗೆ ಗೋಡ್ಸೆ ಮೇಲೆ ಅಭಿಮಾನವಿದೆ. ಹೀಗಾಗಿ ನಾವು ಅವರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇವೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.