
ಬೆಂಗಳೂರು(ಸೆ.18): ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಕೆಲವೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ಹತ್ಯೆಯ ವಿಚಾರವನ್ನು ವಿನಿಮಯ ಮಾಡಿಕೊಂಡವರ ಪತ್ತೆಗೆ ಎಸ್ಐಟಿ ಮುಂದಾಗಿದೆ.
ಗೌರಿ ಅವರನ್ನು ಹಂತಕರು ಹತ್ಯೆ ಮಾಡಿದ ವಿಷಯ ಪೊಲೀಸರಿಗೆ ತಿಳಿಯುವ ಮುನ್ನವೇ ಸಾಮಾಜಿಕ ಜಾಲತಾಣ ೇಸ್ಬುಕ್ ಮತ್ತು ಟ್ವೀಟರ್ನಲ್ಲಿ ಹತ್ಯೆಯ ವಿಚಾರ ಹರಿದಾಡಿತ್ತು. ಅದುವೇ ಹತ್ಯೆ ನಡೆದ ಐದಾರು ನಿಮಿಷದಲ್ಲೇ ಈ ವಿಚಾರ ವಿನಿಮಯ ಆಗಿದೆ. ಹೀಗಾಗಿ ಫೇಸ್ ಬುಕ್ ಮತ್ತು ಟ್ವೀಟರ್ನಲ್ಲಿ ಈ ವಿಚಾರ ಹಾಕಿದವರನ್ನು ಪತ್ತೆ ಹಚ್ಚಲು ಸಿಐಡಿ ಸೈಬರ್ ಕ್ರೈಂ ಪೊಲೀಸರಿಗೆ ಹೊಣೆ ವಹಿಸಲಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಸ್ಟೇಟಸ್ ಹಾಕಿದವರು ಪತ್ತೆಯಾದ ಬಳಿಕ ಎಸ್ಐಟಿ ತಂಡ ಅವರನ್ನು ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.