
ನವದೆಹಲಿ (ಮಾ.21): ಸಂಸದರ ಕಡಿಮೆ ಹಾಜರಾತಿ ಮತ್ತು ನಿಧಾನಗತಿಯ ಕೆಲಸಕ್ಕಾಗಿ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗಬೇಕಾದರೂ ನಿಮ್ಮನ್ನು ಕರೆಯಬಹುದು. ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ ಎಂದು ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಂಸತ್ತನ್ನು ಒಂದು ದಿನವೂ ಕೂಡಾ ತಪ್ಪಿಸಿಕೊಳ್ಳುವಂತಿಲ್ಲ. ಸಂಸತ್ ನಲ್ಲಿ ಭಾಗವಹಿಸುವುದು ಸಂಸದರ ಮೂಲಭೂತ ಜವಾಬ್ದಾರಿ. ಅದನ್ನು ವಿನಂತಿ ಮಾಡಿಸಿಕೊಳ್ಳಬಾರದು. ಅವರವರ ಕ್ಷೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಪ್ರಧಾನಿ ಮೋದಿ ಇಂದು ನಡೆದ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ.
ಬಜೆಟ್ ಅಧಿವೇಶನ ನಡೆಯುತ್ತಿದ್ದು ಸಂಸತ್ ಉಭಯ ಸದನಗಳಲ್ಲಿ ಸಂಸದರ ಗೈರು ಹಾಜರು ಎದ್ದು ಕಾಣುತ್ತಿತ್ತು. ಆಸನಗಳು ಖಾಲಿ ಬಿದ್ದಿದ್ದವು. ಇದನ್ನು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಪ್ರಸ್ತಾಪಿಸಿದರು. ಸದನದಲ್ಲಿ ಸಂಸದರ ಹಾಜರಿ ಪ್ರಮಾಣ ಕಡಿಮೆಯಿದ್ದಾಗ ಕೋರಮ್ ಗಂಟೆ ಬಾರಿಸುತ್ತದೆ. ಸಂಸದರು ಬರುವವರೆಗೆ ಕಲಾಪವನ್ನು ಸ್ಥಗಿತಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂಸದರು ಆಗಾಗ ಸೇರುವ, ಅನೌಪಚಾರಿಕವಾಗಿ ಮಾತುಕತೆ ನಡೆಸುವ ಸೆಂಟ್ರಲ್ ಹಾಲ್ ನಲ್ಲಿದ್ದೇವೆ ಎಂದು ಹೇಳುವುದು ಸಮರ್ಥನೆಯಲ್ಲ. ಸದನದ ಒಳಗೆ ಇರುವುದು ಮುಖ್ಯ ಎಂದು ಮೋದಿ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.