‘ದಲಿತನ ನಾಯಕನ ಅವಧಿ ಪೂರ್ಣಕ್ಕೆ ಕಾಂಗ್ರೆಸ್ ಫುಲ್ ಸ್ಟಾಪ್’

Published : Nov 19, 2018, 10:36 AM IST
‘ದಲಿತನ ನಾಯಕನ ಅವಧಿ ಪೂರ್ಣಕ್ಕೆ ಕಾಂಗ್ರೆಸ್ ಫುಲ್ ಸ್ಟಾಪ್’

ಸಾರಾಂಶ

ದಲಿತನ ನಾಯಕನ ಹುದ್ದೆಯ ಅವಧಿಯನ್ನು ಪೂರ್ಣ ಮಾಡಲು ಕಾಂಗ್ರೆಸ್ ಫುಲ್ ಸ್ಟಾಪ್ ಇಟ್ಟಿದೆ. ಉದ್ದೇಶಪುರ್ವಕವಾಗಿಯೇ ನಾಯಕನನ್ನು ಹೊರದಬ್ಬಲಾಗಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. 

ಮಹಾಸಮುಂದ್ (ಛತ್ತೀಸ್‌ಗಢ): ಕಾಂಗ್ರೆಸ್ ಹಾಗೂ ನೆಹರು-ಗಾಂಧಿ ಕುಟುಂಬದ ವಿರುದ್ಧ ಭಾವನಾತ್ಮಕ ವಿಷಯಗಳ ಮೂಲಕ ವಾಕ್‌ಪ್ರಹಾರ ನಡೆಸುವುದನ್ನು ಮುಂದುವರಿಸಿರುವ ಪ್ರಧಾನಿ ಮೋದಿ ಅವರು, ‘ದಲಿತ ನಾಯಕರಾದ ಸೀತಾರಾಂ ಕೇಸರಿ ಅವರ ಕಾಂಗ್ರೆಸ್ ಅಧ್ಯಕ್ಷಗಿರಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಸೋನಿಯಾ ಗಾಂಧಿಗೆ ಅವಕಾಶ ಕೊಡಿಸುವ ಉದ್ದೇಶದಿಂದ ಅವರನ್ನು ಅಧಿಕಾರದಿಂದ ಹೊರದಬ್ಬಲಾಯಿತು’ ಎಂದು ಟೀಕಿಸಿದರು.

ಭಾನುವಾರ ಇಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಒಂದೇ ಕುಟುಂಬದ ೪ ತಲೆಮಾರುಗಳು ಈ
ದೇಶವನ್ನು ಆಳಿದವು. ಅಧಿಕಾರದಿಂದ ಲಾಭ ಪಡೆದವು. ಆದರೆ ದೇಶಕ್ಕೆ ಇದರಿಂದ ಲಾಭವಾಗಲಿಲ್ಲ’ ಎಂದು ವಿಷಾದಿಸಿದರು. ‘ದಲಿತನೆಂಬ ಕಾರಣಕ್ಕೆ ಸೀತಾರಾಂ ಕೇಸರಿ ಅವರಿಗೆ ಅಧಿಕಾರ ಪೂರ್ಣಗೊಳಿಸಲು ಬಿಡಲಿಲ್ಲ. 

ಸೋನಿಯಾ ಗಾಂಧಿ ಅಧ್ಯಕ್ಷೆ ಯಾಗಬೇಕು ಎಂಬ ಉದ್ದೇಶದಿಂದ ಕೇಸರಿ ಅವರನ್ನು ಪಕ್ಷದ ಕಚೇರಿಯಿಂದ ಫುಟ್‌ಪಾತ್ ಮೇಲೆ ಹೊರದಬ್ಬಲಾಯಿತು’ ಎಂದು ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತಿನ್ ನಬಿ ಆಯ್ಕೆ, ಶುಭಕೋರಿದ ಜೆಪಿ ನಡ್ಡಾ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?