
ನವದೆಹಲಿ: ರಾಜ್ಯಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಕಾಂಗ್ರೆಸ್ಸಿನ ರೇಣುಕಾ ಚೌಧರಿ ಗಹಗಹಿಸಿ ನಕ್ಕರು.
ಆಗ ಸಭಾಪತಿ ವೆಂಕಯ್ಯ ನಾಯ್ಡು ಅವರು ರೇಣುಕಾರನ್ನು ತಡೆಯಲು ಮುಂದಾಗಿ, ‘ಸಮಸ್ಯೆ ಇದ್ದರೆ ವೈದ್ಯರ ಹತ್ತಿರ ಹೋಗಿ’ ಎಂದು ಗರಂ ಆದರು. ಈ ವೇಳೆ ನಾಯ್ಡು ಅವರನ್ನೇ ತಡೆದ ಮೋದಿ, ‘ರಾಮಾಯಣ ಸೀರಿಯಲ್ನಲ್ಲಿ ಈ ನಗು ಕೇಳಿದ್ದೆ. ಬಳಿಕ ಈಗಲೇ ಕೇಳುತ್ತಿರುವೆ. ನಗಲಿ ಬಿಡಿ..’ ಎಂದಾಗ ರಾಜ್ಯಸಭೆ ಗೊಳ್ಳೆಂದು ನಕ್ಕಿತು.
ರೇಣುಕಾ ಮುಖ ಕೆಂಪಗಾಯಿತು. ಕಲಾಪದ ಬಳಿಕ ಸುದ್ದಿಗಾರರ ಮುಂದೆ ಪ್ರತಿಕ್ರಿಯೆ ನೀಡಿದ ರೇಣುಕಾ, ‘ನನನ್ನು ರಾಮಾಯಣದಲ್ಲಿ ನಗುತ್ತಿದ್ದ ಶೂರ್ಪನಖಿಗೆ ಹೋಲಿಸಿ ಮೋದಿ ಅವರು ಮಹಿಳಾ ಸಮುದಾಯಕ್ಕೇ ಅವಮಾನ ಮಾಡಿದ್ದಾರೆ’ ಎಂದು ಅಳಲು ತೋಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.