ನೊಟು ನಿಷೇಧ ಚರ್ಚಿಸಲು ಪ್ರಧಾನಿ ಬಳಿ ಸಮಯವಿಲ್ಲ, ಆದರೆ ಸಂಗೀತೋತ್ಸವಕ್ಕಾಗಿ ಇದೆ: ಕಾಂಗ್ರೆಸ್ ಕಿಡಿ

Published : Nov 20, 2016, 12:39 PM ISTUpdated : Apr 11, 2018, 12:47 PM IST
ನೊಟು ನಿಷೇಧ ಚರ್ಚಿಸಲು ಪ್ರಧಾನಿ ಬಳಿ ಸಮಯವಿಲ್ಲ, ಆದರೆ ಸಂಗೀತೋತ್ಸವಕ್ಕಾಗಿ ಇದೆ: ಕಾಂಗ್ರೆಸ್ ಕಿಡಿ

ಸಾರಾಂಶ

ಸಂಗೀತೋತ್ಸವಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವುದರಿಂದ ದೇಶ ನಡೆಯುವುದಿಲ್ಲ, ಬದಲಾಗಿ ಸಂಸತ್ತು ಹಾಗೂ ಜನರಿಗೆ ಜವಾಬ್ದಾರರಾಗಿರಬೇಕಾಗುತ್ತದೆ, ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ನವದೆಹಲಿ (ನ.20): ಅಪಮೌಲ್ಯೀಕರಣ ಕುರಿತು ಚರ್ಚೆ ನಡೆಸಲು ಸಂಸತ್ತಿಗೆ ಬಾರದೇ  ಪ್ರಧಾನಿ ನರೇಂದ್ರ ಮೋದಿ ಪರಾರಿಯಾಗಿದ್ದಾರೆ, ಆದರೆ ಅವರ ಬಳಿ ಸಂಗೀತೋತ್ಸವಗಳನ್ನು ಉದ್ದೇಶಿಸಿ ಮಾತನಾಡಲು ಸಮಯವಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಖ್ಯಾತ ಅಂತರಾಷ್ಟ್ರೀಯ ಬ್ಯಾಂಡ್ ಆಗಿರುವ ಕೋಲ್ಡ್ ಪ್ಲೇ ತಂಡ ಭಾಗವಹಿಸಿರುವ ‘ಗ್ಲೋಬಲ್ ಸಿಟಿಜನ್ಸ್ ಫೆಸ್ಟಿವಲ್’ ಮುಂಬೈಯಲ್ಲಿ ಆರಂಭವಾಗಿದೆ. ಈ ಸಂಗೀತೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ಸಂಗೀತೋತ್ಸವಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವುದರಿಂದ ದೇಶ ನಡೆಯುವುದಿಲ್ಲ, ಬದಲಾಗಿ ಸಂಸತ್ತು ಹಾಗೂ ಜನರಿಗೆ ಜವಾಬ್ದಾರರಾಗಿರಬೇಕಾಗುತ್ತದೆ, ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ನೋಟು ನಿಷೇಧದಿಂದಾಗಿ 55 ಮಂದಿ ಸಾವನಪ್ಪಿದ್ದಾರೆ,  ಕಳೆದ 11 ದಿನಗಳಲ್ಲಿ ಕೋಟ್ಯಾಂತರ ಜನ ಬ್ಯಾಮಕಿನ ಸರತಿಯಲ್ಲಿ ನಿಂತಿದ್ದಾರೆ, ಬ್ಯಾಂಕುಗಳಲ್ಲಿ ನಗದು ಇಲ್ಲ, ಏಟಿಎಮ್’ಗಳಲ್ಲಿ ನೋಟುಗಳಿಲ್ಲ. ಜನರ ಖತೆಯಲ್ಲಿ ಹಣವಿದೆ, ಆದರೆ ಅದನ್ನು ತೆಗೆಯುವಂತಿಲ್ಲ, ಇವೆಲ್ಲಾವನ್ನು ಚರ್ಚಿಸೋಣವೆಂದರೆ ಚಳಿಗಾಲದ ಅಧಿವೇಶನದಿಂದ ಪ್ರಧಾನಿಯವರೇ ನಾಪತ್ತೆಯಾಗಿದ್ದಾರೆ, ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರು ಬಂದು ಅಪಮೌಲ್ಯೀಕರಣ ಕ್ರಮದ ಬಗ್ಗೆ ಉತ್ತರ ನೀಡಬೇಕೆಂದು ರಾಜ್ಯಸಭೆ ಮೊದಲ ದಿನದಿಂದ ಆಗ್ರಹಿಸುತ್ತಿದ್ದರೂ ಬಂದಿಲ್ಲ, ಆದರೆ ಮುಂಬೈಯ ಸಂಗೀತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲು ಸಮಯವಿದೆ, ಎಂದು ಸುರ್ಜೆವಾಲ ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಂಡ ಹಾಕಿ ಲೈಂಗಿಕ ದೌರ್ಜನ್ಯ ಕೇಸ್ ಮುಚ್ಚಿ ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು! ಏನಿದು ಪ್ರಕರಣ?
ಗ್ರೇಟರ್ ಬೆಂಗಳೂರು: ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ತಡೆ, ಬಡರೋಗಿಗಳ ನೆರವಿಗೆ ಕತ್ತರಿ?