ಐಪಿಎಲ್: ನಾಳೆ ಆಟಗಾರರ ರೀಟೈನ್ ಪಟ್ಟಿ ಪ್ರಕಟ; ಸ್ಟಾರ್ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರ

Published : Jan 03, 2018, 12:37 PM ISTUpdated : Apr 11, 2018, 12:46 PM IST
ಐಪಿಎಲ್: ನಾಳೆ ಆಟಗಾರರ ರೀಟೈನ್ ಪಟ್ಟಿ ಪ್ರಕಟ; ಸ್ಟಾರ್ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರ

ಸಾರಾಂಶ

ಪ್ರತಿ ತಂಡಕ್ಕೂ ಈ ಬಾರಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ರೀಟೈನ್ ನಿಯಮದಂತೆ ಹರಾಜಿಗೂ ಮುನ್ನ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ತಿಂಗಳಂತ್ಯದಲ್ಲಿ ಬೆಂಗಳೂರಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ 2 ಆಟಗಾರರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಬಹುದಾಗಿದೆ.

ಮುಂಬೈ(ಜ.03): ಇದೇ ಮೊದಲ ಬಾರಿಗೆ ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ನೇರ ಪ್ರಸಾರದಲ್ಲಿ ಪ್ರಕಟಿಸಲಿವೆ. ಗುರುವಾರ (ಜ.4)ರಂದು ನಡೆಯಲಿರುವ ರೀಟೈನ್ ಪಟ್ಟಿ ಪ್ರಕಟಕ್ಕಾಗಿ ಬಿಸಿಸಿಐ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸ್ಟಾರ್ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರವಾಗಲಿದೆ.

ಗುರುವಾರ ಸಂಜೆ ಕಾರ್ಯಕ್ರಮ ನಿಗದಿಯಾಗಿದ್ದು, ತಂಡದ ಮಾಲೀಕರು ಖುದ್ದು ಹಾಜರಾಗಿ ತಾವು ಉಳಿಸಿಕೊಳ್ಳಲು ನಿರ್ಧರಿಸಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಲಭ್ಯವಿದ್ದರೆ ಆಟಗಾರರನ್ನೂ ಕರೆತರಲು ಸೂಚಿಸಲಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಮಾಲೀಕರು, ಇ-ಮೇಲ್ ಮೂಲಕ ಬಿಸಿಸಿಐಗೆ ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಕಳುಹಿಸುತ್ತಿದ್ದರು.

ಪ್ರತಿ ತಂಡಕ್ಕೂ ಈ ಬಾರಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ರೀಟೈನ್ ನಿಯಮದಂತೆ ಹರಾಜಿಗೂ ಮುನ್ನ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ತಿಂಗಳಂತ್ಯದಲ್ಲಿ ಬೆಂಗಳೂರಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ 2 ಆಟಗಾರರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಬಹುದಾಗಿದೆ. ಒಂದೊಮ್ಮೆ ಹರಾಜಿಗೂ ಮುನ್ನ ಇಬ್ಬರು ಇಲ್ಲವೇ ಒಬ್ಬ ಆಟಗಾರನನ್ನು ಉಳಿಸಿಕೊಂಡರೆ, ಹರಾಜಿನಲ್ಲಿ ಗರಿಷ್ಠ 3 ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅವಕಾಶವಿದೆ.

ರೀಟೈನ್ ಪ್ರಕ್ರಿಯೆ ವೇಳಾಪಟ್ಟಿ: ಜ.4ರ ಸಂಜೆ 6.50ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್
ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ