
ಬೆಂಗಳೂರು(ಡಿ.12): ಸಿಎಂ ಕುಮಾರಸ್ವಾಮಿಗೆ ಇಂದು ಅಚ್ಚರಿ ಎದುರಾಗಿತ್ತು. ದಶಕಗಳ ಹಿಂದೆ ಸಿಎಂ ಕುಮಾರಸ್ವಾಮಿ ಕೃಪೆಯಿಂದ ಉದ್ಯೋಗ ಪಡೆದುಕೊಂಡ ವಿಕಲಚೇತನ ಮಹಿಳೆ ಶೀಲಾ ಹಾಗೂ ಸಹೋದ್ಯೋಗಿ ಅಂಧ ಉಮೇಶ್ ಜವಳಿ ಇಂದು ಕುಮಾರಸ್ವಾಮಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ, ಶೀಲಾ ಹಾಗೂ ಉಮೇಶ್ ಉದ್ಯೋಗಕ್ಕಾಗಿ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ್ದ ಸಿಎಂ, ವಿಕಲಚೇತನ ಕೋಟಾದಡಿ ವಿಟಿಯುನಲ್ಲಿ ಉದ್ಯೋಗ ಕೊಡಿಸಿದ್ದರು.
ಇದೀಗ 12 ವರ್ಷಗಳ ಬಳಿಕ ಮತ್ತೆ ಕುಮಾರಸ್ವಾಮಿಯನ್ನ ವಿಟಿಯು ಕ್ಯಾಂಪಸ್ ನಲ್ಲಿ ಭೇಟಿಯಾದ ಶೀಲಾ ಹಾಗೂ ಉಮೇಶ್ ಸಂತಸ ಹಂಚಿಕೊಂಡರು. ಇಷ್ಟೇ ಅಲ್ಲ ಹೊಸ ಬೆಳಕಿಗೆ ಕಾರಣರಾದ ಕುಮಾರಸ್ವಾಮಿಗೆ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.