
ಮಂಡ್ಯ (ಡಿ.04): ಕೇಂದ್ರ ಸರ್ಕಾರ 500 ಮತ್ತು 1000 ನೋಟು ಬ್ಯಾನ್ ಮಾಡಿ 2 ಸಾವಿರ ಹೊಸ ನೋಟು ಹೊರ ತಂದಿದೆ.
ಇದರಿಂದಾಗಿ ಎಲ್ಲೆಡೆ ಚಿಲ್ಲರೆ ಸಮಸ್ಯೆ ತಲೆತೋರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಿಡಿಗೇಡಿಗಳು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಕಲಿ ಮತ್ತು ಜೆರಾಕ್ಸ್’ನ 50 ಮತ್ತು 100 ರೂಪಾಯಿ ನೋಟುಗಳನ್ನು ಚಲಾವಣೆ ಮಾಡ್ತಿದ್ದಾರೆ.
ಇದರಿಂದ ಪಾಂಡವಪುರ ತಾಲೂಕಿನ ಸುತ್ತಮುತ್ತ 50 ಮತ್ತು 100 ರೂಪಾಯಿ ಜೆರಾಕ್ಸ್ ನೋಟು ಚಲಾವಣೆಯಾಗ್ತಿದೆ. ಅಮಾಯಕರು ಈ ನೋಟು ಪಡೆದುಕೊಂಡು ಬೇಸ್ತು ಬೀಳ್ತಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಮತ್ತು ಇತರ ಇಲಾಖೆಗಳು ಇತ್ತ ಗಮನ ಹರಿಸಿ ಈ ನಕಲಿ ಮತ್ತು ಜೆರಾಕ್ಸ್ ನೋಟುಗಳ ಹಾವಳಿ ಸಮಸ್ಯೆ ನಿಲ್ಲಿಸುವಂತೆ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.