ಪೆಟ್ರೋಲ್, ಡೀಸೆಲ್ ಲಾರಿ ಮಾಲೀಕರು ಇಂದು ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. PWD ಇಲಾಖೆಯಿಂದ ರಸ್ತೆ ದುರಸ್ತಿ ಭರವಸೆ ನೀಡಿದ್ದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಬೆಂಗಳೂರು : ಪೆಟ್ರೋಲ್, ಡೀಸೆಲ್ ಲಾರಿ ಮಾಲೀಕರು ಇಂದು ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. PWD ಇಲಾಖೆಯಿಂದ ರಸ್ತೆ ದುರಸ್ತಿ ಭರವಸೆ ನೀಡಿದ್ದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಆದರೆ ಮುಷ್ಕರ ವಾಪಸ್ ಪಡೆದಿದ್ದರೂ ಕೂಡ ಇಂದು ನಗರದಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸ್ಟಾಕ್ ಇರುವ ಪೆಟ್ರೋಲ್ ಹಾಗೂ ಡೀಸೆಲ್ ಮಾತ್ರ ವಾಹನ ಸವಾರರಿಗೆ ಸಿಗುತ್ತಿದೆ.
ನಾಳೆ ಇಂಧನ ಸಾಗಣೆ ಆಗಲಿದ್ದು, ನಾಳೆವರೆಗೂ ಸವಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.