ಫೈನಾನ್ಸ್'ನಲ್ಲಿ ಚಿನ್ನ ಅಡವಿಟ್ಟರಿಗೆ ಶಾಕ್: ಬಡ್ಡಿ ಕಟ್ಟಲು ವಿಳಂಬ ಮಾಡಿದ್ದಕ್ಕೆ ಚಿನ್ನ ಹರಾಜು

Published : Jan 23, 2017, 03:55 AM ISTUpdated : Apr 11, 2018, 12:44 PM IST
ಫೈನಾನ್ಸ್'ನಲ್ಲಿ ಚಿನ್ನ ಅಡವಿಟ್ಟರಿಗೆ ಶಾಕ್: ಬಡ್ಡಿ ಕಟ್ಟಲು ವಿಳಂಬ ಮಾಡಿದ್ದಕ್ಕೆ ಚಿನ್ನ ಹರಾಜು

ಸಾರಾಂಶ

ಕಷ್ಟದ ಕಾಲ ಬಂದಾಗ ಚಿನ್ನ ಅಡವಿಟ್ಟು ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆಯುವುದು ಕಾಮಾನ್​. ಹೀಗೆ ಸಾಲ ಪಡೆಯಲು ಇಟ್ಟ ಬಂಗಾರದವನ್ನ ಖಾಸಗಿ ಫೈನಾನ್ಸ್​ನವರು ಯಾವುದೇ ನೊಟೀಸ್​​ ನೀಡದೇ ಹರಾಜು ಮಾಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ. ಆ ಫೈನಾನ್ಸ್ ಕಂಪನಿ ಯಾವುದು ಅಂತೀರಾ ಈ ಸ್ಟೋರಿ ನೋಡಿ.

ಚಿತ್ರದುರ್ಗ(ಜ.23): ಕಷ್ಟದ ಕಾಲ ಬಂದಾಗ ಚಿನ್ನ ಅಡವಿಟ್ಟು ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆಯುವುದು ಕಾಮಾನ್​. ಹೀಗೆ ಸಾಲ ಪಡೆಯಲು ಇಟ್ಟ ಬಂಗಾರದವನ್ನ ಖಾಸಗಿ ಫೈನಾನ್ಸ್​ನವರು ಯಾವುದೇ ನೊಟೀಸ್​​ ನೀಡದೇ ಹರಾಜು ಮಾಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ. ಆ ಫೈನಾನ್ಸ್ ಕಂಪನಿ ಯಾವುದು ಅಂತೀರಾ ಈ ಸ್ಟೋರಿ ನೋಡಿ.

ಚಿತ್ರದುರ್ಗ ಜಿಲ್ಲೆ ಜನರು ಒಂದೆಡೆ  ಬರದಿಂದ ತತ್ತರಿಸಿ ಹೋಗಿದ್ದಾರೆ. ಮತ್ತೊಂದು ಕಡೆ ನೋಟ್​ಬ್ಯಾನ್​ನಿಂದಾಗಿ  ಪಡೆದುಕೊಂಡು ಸಾಲ ಮರುಪಾವತಿಸಲಾಗದೇ ಪರದಾಡುತ್ತಿದ್ದಾರೆ. ಇಂಥಾ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಐಐಎಫ್ಎಲ್ ಫೈನಾನ್ಸ್ , ಬಡ್ಡಿ ಕಟ್ಟಲು ವಿಳಂಬ ಮಾಡುತ್ತಿರುವವರ ಚಿನ್ನವನ್ನೇ ಹರಾಜಾಗಿಡಲು ಮುಂದಾಗಿದೆಯಂತೆ.

ಇನ್ನು ಫೈನಾನ್ಸ್​'ನವರು ಚಿನ್ನ ಹರಾಜು ಮಾಡಲು ಮುಂದಾಗಿದ್ದಾರೆ ಎಂಬ ವಿಚಾರ ತಿಳಿದು ಫೈನಾನ್ಸ್'ಗೆ ಆಗಮಿಸಿದ ಗ್ರಾಹಕರಿಗೆ ಫೈನಾನ್ಸ್  ಸಿಬ್ಬಂದಿ ಬೆದರಿಕೆ ಹಾಕಲು ಮುಂದಾಗಿದ್ದಾರೆ. ಜೊತೆಗೆ ಹೆಡ್​ ಆಫೀಸ್​ ಆದೇಶವಿದೆ. ಹಾಗಾಗಿ ನಾವು ಚಿನ್ನ ಹರಾಜು ಮಾಡುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಿದ್ದರೂ ಐಐಎಫ್'ಎಲ್  ಫೈನಾನ್ಸ್ ಕಂಪನಿ ಅಂಧಾ ಕಾನೂನು ಪ್ರಕಾರ ಚಿನ್ನ ಹರಾಜಿಗೆ ಮುಂದಾಗಿದೆ. ಅಡವಿಟ್ಟ ಚಿನ್ನ ಹೇಗೆ ಪಡೆಯಬೇಕು ಎಂಬುವುದೇ ಈಗ ಗ್ರಾಹಕರಿಗೆ ಯಕ್ಷಪ್ರಶ್ನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ