
ಶ್ರೀನಗರ(ಜ.11): ಬಿಎಸ್ಎಫ್ ಅಧಿಕಾರಿಗಳಿಂದ ಅರ್ಧದರಕ್ಕೆ ರೇಷನ್ ಮಾರಾಟವಾಗುತ್ತಿರುವುದು ಸತ್ಯ ಎಂದು ಜಮ್ಮು ಕಾಶ್ಮೀರದ ಶ್ರೀನಗರದ ಜನತೆ ಆರೋಪಿಸಿದ್ದಾರೆ. BSF ಶಿಬಿರಗಳ ಸಮೀಪದ ನಾಗರಿಕರೇ, ಮಾರುಕಟ್ಟೆ ದರಕ್ಕಿಂತ ಅರ್ಧದಷ್ಟು ಬೆಲೆಗೆ ಮಿಲಿಟರಿ ಅಧಿಕಾರಿಗಳು ಮಾರುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಯೋಧ ತೇಜ್ ಬಹದ್ದೂರ್ ಯಾದವ್ ಆರೋಪದಲ್ಲಿ ಯಾವುದೇ ಸುಳ್ಳಿಲ್ಲ ಎಂಬುದು ಅಲ್ಲಿನ ನಾಗರಿಕರ ಹೇಳಿಕೆಗಳಿಂದ ಸಾಬೀತಾಗಿದೆ.
ಹುಮ್ಹಮಾದಲ್ಲಿರುವ ಬಿಎಸ್ಎಫ್ ಕೇಂದ್ರ ಕಚೇರಿಯ ಅಂಗಡಿಗಳವರಿಗೆ ಅಧಿಕಾರಿಗಳು ಪೆಟ್ರೋಲ್, ಡೀಸೆಲ್, ಬೇಳೆ, ತರಕಾರಿಗಳನ್ನು ಮಾರುಕಟ್ಟೆ ದರಕ್ಕಿಂತ ಅರ್ಧ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಸ್ಥಳೀಯರು ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಯೋಧರಿಗೆ ಕೊಡಬೇಕಾದ ವಸ್ತುಗಳನ್ನು, ಯೋಧರಿಗೆ ನೀಡದೆ, ಮಾರಾಟ ಮಾಡುತ್ತಿದ್ದಾರೆ ಎಂಬ ತೇಜ್ ಬಹಾದ್ದೂರ್ ಸಿಂಗ್ ಆರೋಪ, ನಾಗರಿಕರ ಈ ಹೇಳಿಕೆಗಳಿಂದ ಸಾಬೀತಾಗಿದೆ.
ಇನ್ನೊಬ್ಬ ಗುತ್ತಿಗೆದಾರರು, ಮಿಲಿಟರಿ ಅಧಿಕಾರಿಗಳು ತಾವು ಪೂರೈಸುವ ವಸ್ತುಗಳಿಗೆ ಕಮಿಷನ್ ಪಡೆಯುತ್ತಾರೆ. ಕಮಿಷನ್ ಆಸೆಗಾಗಿ ಗುಣಮಟ್ಟದಲ್ಲಿ ರಾಜಿಯಾಗುತ್ತಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.