
ಬೆಂಗಳೂರು(ಡಿ.6): ವೀರಶೈವ ಲಿಂಗಾಯತರು ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಆಗಿರುವುದರಿಂದ ಅದನ್ನು ಛಿದ್ರಗೊಳಿಸಲು ಸಿದ್ದರಾಮಯ್ಯ ಪ್ರಯೋಗಿಸಿರುವ ಬಾಣವೇ ಲಿಂಗಾಯತ ಪ್ರತ್ಯೇಕ ಧರ್ಮ. ಇದಕ್ಕಾಗಿ ರಾಜ್ಯದಲ್ಲೀಗ ಹೋರಾಟವೇ ನಡೆದಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿರುವುದೂ ಹೌದು.
ಆದರೆ, ಪ್ರತ್ಯೇಕ ಧರ್ಮವೆಂಬ ಜೇನುಗೂಡಿಗೆ ಕೈಹಾಕಿರುವ ಕಾಂಗ್ರೆಸ್ಸಿಗೆ ಜೇನುತುಪ್ಪ ಸಿಗುವುದೋ ಅಥವಾ ಜೇನು ಹುಳುಗಳು ಕಡಿಯಲಿವೆಯೋ ಎಂಬುದು ಸ್ಪಷ್ಟವಿರಲಿಲ್ಲ. ಈಗಿನ ಸಮೀಕ್ಷೆಯ ಪ್ರಕಾರ ಶೇ.57 ರಷ್ಟು ಜನರು ಪ್ರತ್ಯೇಕ ಧರ್ಮದ ಪರವಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಿಟ್ಟುಸಿರು ಬಿಡಬಹುದು ಮತ್ತು ಬಿಜೆಪಿಗೆ ತಲೆನೋವು ಜಾಸ್ತಿಯಾಗಬಹುದು.
ಅದರಲ್ಲೂ ಶೇ.66ರಷ್ಟು ಲಿಂಗಾಯತರೇ ಪ್ರತ್ಯೇಕ ಧರ್ಮದ ಪರ ವಾಗಿದ್ದಾರೆ ಎಂಬ ಅಂಶ ಕಾಂಗ್ರೆಸ್ಸಿನ ಖುಷಿಯನ್ನು ಹೆಚ್ಚಿಸಲಿದೆ. ಗಮನಾರ್ಹ ಸಂಗತಿಯೆಂದರೆ ಇನ್ನೂ ಪ್ರಬಲ ಒಕ್ಕಲಿಗ, ಕುರುಬ ಮತ್ತು ಒಬಿಸಿಗಳಲ್ಲೂ ಪ್ರತ್ಯೇಕ ಲಿಂಗಾಯತ ಧರ್ಮ ಆಗಲಿ ಎನ್ನುವವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿದೆ. ಇದೂ ಕೂಡ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮತ್ತು ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಫಲಿಸುತ್ತಿರುವುದರ ಸೂಚನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.