ಬೀದರ್ ನೆರೆ: ರೈತರಿಗೆ ತಕ್ಷಣ ಪರಿಹಾರ ನೀಡಲು ಶೆಟ್ಟರ್ ಆಗ್ರಹ

By Internet DeskFirst Published Sep 27, 2016, 10:24 AM IST
Highlights

ಬೀದರ್ (ಸೆ.27): ಬೀದರ್​ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬೆಳೆ ಹಾನಿಯಾದ ರೈತರಿಗೆ ತಕ್ಷಣವೇ ಪರಿಹಾರ ಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೀದರ್​ ಜಿಲ್ಲೆಯಾದ್ಯಂತ ಸುರಿದ ಭೀಕರ ಮಳೆಯಿಂದಾಗಿ ನೆರೆ ಉಂಟಾಗಿತ್ತು. 

Latest Videos

ಈ ವೇಳೆ ಜಿಲ್ಲೆಯಲ್ಲಾದ ಹಾನಿಯ ಪರಿಹಾರ ನೀಡುವಂತೆ ಸರ್ಕಾರಕ್ಕೆ ಎರಡು ಸಾವಿರ ಕೋಟಿಯ ನಷ್ಟದ ಮಾಹಿತಿ ನೀಡಲಾಗಿದೆ. ಸಿಎಂ ವೈಮಾನಿಕ ಸಮೀಕ್ಷೆಯಿಂದ ಸಮಸ್ಯೆ ಪರಿಹಾರ ಆಗಲ್ಲ. ಇದರಿಂದ ಸಂಕಷ್ಟಕ್ಕೊಳಗಾದವರ ನೋವು ಸಿಎಂಗೆ  ಅರ್ಥವಾಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಬೀದರ್​ ಜಿಲ್ಲೆ ಯಲ್ಲಿ  ಭಾರೀ  ಪ್ರಮಾಣದಲ್ಲಿ  ನಷ್ಟವಾಗಿದೆ. ಬೆಳೆ ಹಾನಿಯಾದ ರೈತರಿಗೆ ತಕ್ಷಣವೇ ಪರಿಹಾರ ಕೊಡಬೇಕು ಎಂದು ಶೆಟ್ಟರ್​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

click me!