ಮಣಿಪುರ ಮಹಿಳೆ ಅಸ್ವಸ್ಥೆ: ಜೆಸಿಬಿಯಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಗೆ ರವಾನೆ!

Published : Jul 19, 2017, 10:17 AM ISTUpdated : Apr 11, 2018, 12:40 PM IST
ಮಣಿಪುರ ಮಹಿಳೆ ಅಸ್ವಸ್ಥೆ: ಜೆಸಿಬಿಯಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಗೆ ರವಾನೆ!

ಸಾರಾಂಶ

ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಲಭ್ಯವಾಗದ ಕಾರಣ, ನೆಲ ಅಗೆಯಲು ಉಪಯೋಗಿಸುವ ಜೆಸಿಬಿ ಯಂತ್ರದಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಯೊಂದಕ್ಕೆ ಸಾಗಿಸಿದ ಘಟನೆ ಮಣಿಪುರದಲ್ಲಿ ನಡೆದಿದೆ.

ಗುವಾಹಟಿ(ಜು.19): ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಲಭ್ಯವಾಗದ ಕಾರಣ, ನೆಲ ಅಗೆಯಲು ಉಪಯೋಗಿಸುವ ಜೆಸಿಬಿ ಯಂತ್ರದಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಯೊಂದಕ್ಕೆ ಸಾಗಿಸಿದ ಘಟನೆ ಮಣಿಪುರದಲ್ಲಿ ನಡೆದಿದೆ.

ಮಣಿಪುರದ ಚಾಂಡೇಲ್ ಜಿಲ್ಲೆಯ ನ್ಯೂ ಗ್ಯಾಮ್ನೊಮ್ ಗ್ರಾಮದಲ್ಲಿ 40 ವರ್ಷದ ಥಂಗಟಿನ್ ಬೈಟೆ ಎಂಬ ಮಹಿಳೆ ನಿಗೂಢ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯ ಪರಿಸ್ಥಿತಿ ವಿಷಮಿಸಿತು. ಬೈಟೆಯನ್ನು 2 ಕಿ.ಮೀ. ದೂರದಲ್ಲೇ ಇದ್ದ ಸೆಹ್ಲೋನ್‌'ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ ಅಲ್ಲಿ ವೈದ್ಯರು ಅಥವಾ ಔಷಧ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಹೀಗಾಗಿ 20 ಕಿ.ಮೀ. ದೂರದಲ್ಲಿನ ಮ್ಯಾನ್ಮಾರ' ನ ಆಸ್ಪತ್ರೆಗೆ ಹೋಗಲು ನಿರ್ಧರಿಸಲಾಯಿತು.

ಈ ವೇಳೆ ವಾಹನ ಸಿಗದ ಕಾರಣ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಗ್ರಾಮಸ್ಥರು ಕಣ್ಣಿಗೆ ಬಿತ್ತು. ಜೆಸಿಬಿ ಮುಂಭಾಗದ ಮಣ್ಣು ಬಗೆಯುವ ಜಾಗದಲ್ಲಿ ಮಹಿಳೆಯನ್ನು ಮಲಗಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಳು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ