
ನವದೆಹಲಿ (ಏ.08): ಚುನಾವಣೆ ಪೂರ್ವದಲ್ಲಿ ನೀಡುವ ಆಶ್ವಾಸನೆಗಳನ್ನು ರಾಜಕೀಯ ಪಕ್ಷಗಳು ಈಡೇರಿಸುವುದಿಲ್ಲ, ಹಾಗೂ ಪ್ರಣಾಳಿಕೆಗಳು ಕಾಗದದ ತುಂಡುಗಳಾಗಿಯೇ ಉಳಿದು ಹೋಗುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಜೆ,ಎಸ್.ಖೆಹರ್ ಹೇಳಿದ್ದಾರೆ.
‘ಇಂದಿನ ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಗಳು ಕೇವಲ ಕಾಗದದ ಹಾಳೆಗಳಾಗಿಯೇ ಉಳಿಯುತ್ತಿವೆ. ಅದಕ್ಕೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿಸುವ ಅಗತ್ಯವಿದೆ’ ಎಂದು ನ್ಯಾ. ಖೆಹರ್ ಉಪನ್ಯಾಸವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ಬಳಿಕ ಆಶ್ವಾಸನೆಗಳನ್ನು ಈಡೇರಿಸದೇ ರಾಜಕೀಯ ಪಕ್ಷಗಳು ಕ್ಷುಲ್ಲಕ ಕಾರಣಗಳನ್ನು ಮುಂದಿಡುತ್ತವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಿಡಉಗಡೆಮಾಡಿರುವ ಪ್ರಣಾಳಿಕೆಗಳನ್ನು ವಿಮರ್ಶಿಸಿದ ನ್ಯಾ. ಖೆಹರ್, ಹಿಂದುಳಿದ ವರ್ಗಗಳಿಗೆ ಸಾಮಾಜೋ-ಆರ್ಥಿಕ ನ್ಯಾಯವೊದಗಿಸುವ ಸಾಂವಿಧಾನಿಕ ಧ್ಯೇಯ ಹಾಗೂ ಚುನಾವಣಾ ಸುಧಾರಣೆ ನಡುವೆ ಯಾವ ಪ್ರಣಾಳಿಕೆಯಲ್ಲೂ ಪ್ರಸ್ತುತತೆ ಕಂಡು ಬಂದಿಲ್ಲವೆಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.