
ಮುಂಬೈ [ಜು.30] : ಮೀನು ಮಾರಾಟ ಮಾಡುವ ತಾಯಿಯ ಹಲವು ವರ್ಷದ ಪರಿಶ್ರಮದ ಫಲವಾಗಿ ಆಕೆಯ ಪುತ್ರನೀಗ ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯನ್ನು ಸೇರುತ್ತಿದ್ದಾರೆ.
ಮಹಾರಾಷ್ಟ್ರದ ಪಲ್ಗಾರ್ ನಿವಾಸಿಯಾದ 27 ವರ್ಷದ ವಂದೇಶ್ ಪಾಟೀಲ್ ಭಾರತೀಯ ಬಾಹ್ಯಾಕಾಶ ಸಂಸ್ಥೆ [ISRO] ಟೆಕ್ನಿಶಿಯನ್ ಆಗಿ ಆಯ್ಕೆಯಾಗಿ, ತಾಯಿಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ್ದಾರೆ.
ವಂದೇಶ್ ತಂದೆ ರಾಜೇಶ್ 2009ರಲ್ಲಿ ಅನಾರೋಗ್ಯದಿಂದ ಮೃತರಾದರು. ಅಂದಿನಿಂದ ತಾಯಿ ಸುನಂದ ಮಗನ ಏಳ್ಗೆಗಾಗಿ ಹಗಲು ರಾತ್ರಿ ಶ್ರಮಿಸಿದರು. ಮೀನು ಮಾರಿ ಮಗನ ಶಿಕ್ಷಣ ವೆಚ್ಚ ಭರಿಸಿದ್ದು, ಶ್ರಮದ ಪ್ರತಿಫಲ ಇದೀಗ ದೊರಕಿದೆ.
ವಂದೇಶ್ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲಮೋ ಪದವೀದರರಾಗಿದ್ದು, ಬಳಿಕ ಎಲೆಕ್ಟ್ರಾನಿಕ್ ಮೈಂಟೇನನ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪೂರೈಸಿದರು. 2018ರಲ್ಲಿ ಇಸ್ರೋದಲ್ಲಿ ಪರೀಕ್ಷೆ ಎದುರಿಸಿ ತೇರ್ಗಡೆಯಾಗದರು.
ಕೇವಲ 9 ಹುದ್ದೆಗಳಿಗೆ 1200 ಆಕಾಂಕ್ಷಿಗಳಿದ್ದು, ಮಹಾರಾಷ್ಟ್ರದಿಂದ ವಂದೇಶ್ ಓರ್ವರೆ ಪರೀಕ್ಷೆ ತೇರ್ಗಡೆಯಾಗುವಲ್ಲಿ ಯಶಸ್ವಿಯಾದರು. ಆಗಸ್ಟ್ 5 ರಿಂದ ಕೆಲಸಕ್ಕೆ ಹಾಜರಾಗಲಿದ್ದು, ಇವರಿಗೆ All The best ಹೇಳೋಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.