
ನವದೆಹಲಿ (ನ.25): ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಮೇಲೆ ಸರ್ಜಿಕಲ್ ದಾಳೀ ನಡೆಸಿದಾಗಲೇ ಪಾಕ್ ಸಾಮರ್ಥ್ಯ ಬಯಲಾಗಿದೆ ಎಂದು ಪ್ರಧಾನಿ ಮೋದಿ ಪ್ರಧಾನಿ ಮೋದಿ ನವಾಜ್ ಷರೀಫ್ ಗೆ ತಿರುಗೇಟು ನೀಡಿದ್ದಾರೆ.
ನಾವು ನಡೆಸಿದ ಸರ್ಜಿಕಲ್ ದಾಳಿಯಿಂದ ಪಾಕ್ ಇನ್ನೂ ಸುಧಾರಿಸಿಕೊಂಡಿಲ್ಲ. ನಮ್ಮ ಸೈನಿಕರ ಶೌರ್ಯದ ಮುಂದೆ ಪಾಕ್ ಶೌರ್ಯ ಸಾಮರ್ಥ್ಯ ಪ್ರದರ್ಶನವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
“ಪೇಶಾವರ್ ನಲ್ಲಿ ಮುಗ್ದ ಮಕ್ಕಳನ್ನು ಹತ್ಯೆ ಮಾಡಿದಾಗ 125 ಕೋಟಿ ಭಾರತೀಯರ ಕಣ್ಣಲ್ಲಿ ನೀರು ಬಂದಿತ್ತು. ಮಕ್ಕಳನ್ನು ಕಳೆದುಕೊಂಡ ಪಾಕಿಸ್ತಾನಿಯರ ನೋವನ್ನು ಪ್ರತಿಯೊಬ್ಬ ಭಾರತೀಯನು ಫೀಲ್ ಮಾಡಿದ್ದಾನೆ. ಪಾಕ್ ಜನರು ಬೇರೆ ದೇಶದೊಂದಿಗೆ ಯುದ್ಧ ಮಾಡುವಂತೆ ಸರ್ಕಾರಂತೆ ಬೆಂಬಲಿಸುವ ಬದಲು ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವಂತೆ ಸರ್ಕಾರಕ್ಕೆ ಕೇಳಬೇಕು’’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.