ವಾರ್ ಅಂದ್ರೆ ಮಿಸ್ ಕ್ಯಾಲ್ಕುಲೇಶನ್: ಶಾಂತಿಗೆ ಇಮ್ರಾನ್ ಮನವಿ!

Published : Feb 27, 2019, 04:24 PM IST
ವಾರ್ ಅಂದ್ರೆ ಮಿಸ್ ಕ್ಯಾಲ್ಕುಲೇಶನ್: ಶಾಂತಿಗೆ ಇಮ್ರಾನ್ ಮನವಿ!

ಸಾರಾಂಶ

ಮತ್ತೆ ಶಾಂತಿ ಮಾತುಕತೆಗೆ ಮನವಿ ಮಾಡಿದ ಪಾಕಿಸ್ತಾನ ಪ್ರಧಾನಿ| ಶಾಂತಿಗೆ ಮಾತುಕತೆ ಪುನರಾರಂಭಿಸುವಂತೆ ಇಮ್ರಾನ್ ಖಾನ್| ಯುದ್ಧದಿಂದ ಗಳಿಸುವುದು ಏನೂ ಇಲ್ಲ ಎಂದ ಪಾಕ್ ಪ್ರಧಾನಿ| ಭಯೋತ್ಪಾದನೆ ಕುರಿತು ಮಾತನಾಡಲು ಇಮ್ರಾನ್ ಒಪ್ಪಿಗೆ|

ಇಸ್ಲಾಮಾಬಾದ್(ಫೆ.27): ಭಾರತ-ಪಾಕ್ ಸಂಬಂಧ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎರಡನೇ ಬಾರಿ ಶಾಂತಿಗಾಗಿ ಮನವಿ ಮಾಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಇಂದು ಮಾತನಾಡಿದ ಇಮ್ರಾನ್ ಖಾನ್, ಯುದ್ಧವೆಂದರೆ ಕೇವಲ ತಪ್ಪಿದ ಲೆಕ್ಕಾಚಾರವೇ ಹೊರತು ಯಾವುದೇ ರಾಷ್ಟ್ರದ ಜಾಣ ನಡೆ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

"

ಭಾರತದೊಂದಿಗಿನ ಶಾಂತಿ ಮಾತುಕತೆಗೆ ತಾವು ಸಿದ್ಧ ಎಂದು ಪುನರುಚ್ಛಿಸಿರುವ ಇಮ್ರಾನ್, ಭಯೋತ್ಪಾದನೆಯ ಕುರಿತೂ ಮಾತನಾಡೋಣ ಆದರೆ ದಯವಿಟ್ಟು ಯುದ್ಧೋನ್ಮಾದದಿಂದ ಹೊರಬರುವಂತೆ ಮನವಿ ಮಾಡಿದ್ದಾರೆ.

ಯುದ್ಧವಾದರೆ ನನ್ನ ಮತ್ತು ನರೇಂದ್ರ ಮೋದಿ ಕೈಯಲ್ಲಿ ಏನೂ ಇರಲ್ಲ ಎಂದು ಎಚ್ಚರಿಸಿರುವ ಇಮ್ರಾನ್ ಖಾನ್, ಇದರ ಬದಲಾಗಿ ಶಾಂತಿಯಿಂದ ಕುಳಿತು ಮಾತುಕತೆ ಮಾಡುವುದು ಉತ್ತಮ ನಡೆಯಾಗಲಿರಲಿದೆ ಎಂದು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ