ಬೇಕಾದ್ರೆ ಬಂದ್ನೋಡಿ: ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಪಾಕ್ ಆಹ್ವಾನ!

Published : Apr 30, 2019, 11:48 AM IST
ಬೇಕಾದ್ರೆ ಬಂದ್ನೋಡಿ: ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಪಾಕ್ ಆಹ್ವಾನ!

ಸಾರಾಂಶ

ಭಾರತೀಯ ಸೇನೆಯ ಬಾಲಾಕೋಟ್ ವಾಯುದಾಳಿಗೆ ಪಾಕ್ ಪ್ರತಿಕ್ರಿಯೆ| ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಿದ ಪಾಕಿಸ್ತಾನ| ವಾಯುದಾಳಿ ನಡೆದಿಲ್ಲ ಎಂದು ಪುನರುಚ್ಛಿಸಿದ ಪಾಕಿಸ್ತಾನ| ಸತ್ಯದ ದರ್ಶನಕ್ಕಾಗಿ ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಆಹ್ವಾನ| ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಿದ ಪಾಕ್ ಸೇನಾ ವಕ್ತಾರ| ಕಳೆದೆರಡು ತಿಂಗಳಿನಿಂದ ಭಾರತ ಜಗತ್ತಿಗೆ ಸುಳ್ಳು ಹೇಳುತ್ತಿದೆ ಎಂದ ಮೇಜರ್ ಜನರಲ್ ಆಸಿಫ್ ಗಫೂರ್|

ಇಸ್ಲಾಮಾಬಾದ್(ಏ.30): ಭಾರತೀಯ ವಾಯುಸೇನೆ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಪಾಕಿಸ್ತಾನ ಆಹ್ವಾನಿಸಿದೆ.

ಭಾರತೀಯ ವಾಯುಸೇನೆ ವಾಯುದಾಳಿಯಿಂದ ಯಾವುದೇ ಉಗ್ರರು ಸತ್ತಿಲ್ಲ ಎಂದು ಪುರುಚ್ಛಿಸಿರುವ ಪಾಕಿಸ್ತಾನ, ಈ ಕುರಿತು ಪರಿಶೀಲನೆಗಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

ಈ ಕುರಿತು ಮಾತನಾಡಿರುವ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತ ಸರ್ಕಾರ ಮತ್ತು ವಾಯುಸೇನೆ ಪ್ರತಿಪಾದಿಸುತ್ತಿರುವ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದೆರಡು ತಿಂಗಳಿನಿಂದ ಭಾರತ ಜಗತ್ತಿಗೆ ಮತ್ತು ತನ್ನ ಜನತೆಗೆ ಸುಳ್ಳು ಹೇಳುತ್ತಿದ್ದು, ಸತ್ಯದ ದರ್ಶನಕ್ಕಾಗಿ ಭಾರತೀಯ ಪತ್ರಕರ್ತರನ್ನು ಆಹ್ವಾನಿಸುತ್ತಿರುವುದಾಗಿ ಆಸಿಫ್ ಗಫೂರ್ ತಿಳಿಸಿದ್ದಾರೆ.

ಆದರೆ ಬಾಲಾಕೋಟ್ ದಾಳಿಯಲ್ಲಿ ಯಾವುದೇ ಉಗ್ರರು ಸತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರು ಆಶ್ರಯ ಪಡೆದಿರುವುದಾಗಿ ಒಪ್ಪಿಕೊಂಡಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ