
ನವದೆಹಲಿ (ಡಿ.28): ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಪಾಕ್'ಗೆ ತೆರಳಿದ್ದ ಅವರ ತಾಯಿ ಹಾಗೂ ಪತ್ನಿಯ ಬಳಿ ಅಲ್ಲಿನ ಪತ್ರಕರ್ತರು ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದರು.
ಈ ವೇಳೆ ಅವರಿಬ್ಬರನ್ನು ಪ್ರಶ್ನೆ ಮಾಡಿದ ರೀತಿಯೂ ಕೂಡ ತೀರಾ ಅಮಾನವೀಯತೆಯಿಂದಲೇ ಕೂಡಿತ್ತು. ಭೇಟಿ ಮಾಡಿ ಹೊರಕ್ಕೆ ಬಂದ ವೇಳೆ ನೀವು ಓರ್ವ ಉಗ್ರನ ತಾಯಿ, ನೀಮಗೆ ಈ ಬಗ್ಗೆ ಹೇಗನ್ನಿಸುತ್ತದೆ ಎಂದೆಲ್ಲಾ ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕೆಲ್ಲಾ ನೀವು ಉತ್ತರಿಸಬೇಕು ಎಂದು ಹೇಳಿದ್ದರು.
ಇಂತಹ ಪ್ರಶ್ನೆಗಳನ್ನು ಕೇಳಿ ಕೂಗಾಡಿದ ಪತ್ರಕರ್ತರ ನಡೆಯನ್ನು ಹೊಗಳಿದ್ದು, ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿತ್ತು.
ಇದರ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ಕೆಲ ಪತ್ರಕರ್ತರು ಪಾಕ್ ನಡೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಡಾನ್ ಪತ್ರಿಕೆಯ ಪತ್ರಕರ್ತ ಹಸನ್ ಬೆಲಾಲ್ ಜೈದಿ ಇದೊಂದು ಅಮಾನವೀಯಕರವಾದ ನಡೆ ಎಂದಿದ್ದಾರೆ.
ಅಲ್ಲದೇ ಇನ್ನೂ ಕೆಲ ಪತ್ರಕರ್ತರು ಕೂಡ ಸಹೋದ್ಯೋಗಿಗಳ ನಡೆಯನ್ನು ಟೀಕಿಸಿದ್ದಾರೆ. ತಹ ಸಿದ್ದಿಕಿ ಎನ್ನುವ ಡಬ್ಲುಐಒಎನ್ ನ್ಯೂಸ್ ಪತ್ರಕರ್ತ ಇದೊಂದು ಅಸಹ್ಯಕರ ನಡೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.