ಪಾಕ್​ ಪ್ರಚೋದಿತ ಗುಂಡಿನ ದಾಳಿ: ಗಡಿ ಭಾಗದ ಜನರನ್ನು ಖಾಲಿ ಮಾಡಿಸಿದ ಸೇನೆ

Published : Nov 04, 2016, 11:11 AM ISTUpdated : Apr 11, 2018, 12:40 PM IST
ಪಾಕ್​ ಪ್ರಚೋದಿತ ಗುಂಡಿನ ದಾಳಿ: ಗಡಿ ಭಾಗದ ಜನರನ್ನು ಖಾಲಿ ಮಾಡಿಸಿದ ಸೇನೆ

ಸಾರಾಂಶ

ಗಡಿ ನಿಯಂತ್ರಣ ರೇಖೆ  ಬಳಿಯ ಕೆಲ ಗ್ರಾಮಗಳ ಜನರನ್ನ ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಆರಂಭಿಸಿದೆ.

ಜಮ್ಮು(ನ.04): ಜಮ್ಮು ಕಾಶ್ಮೀರದ ನೌಶೀರ ಮತ್ತು ಮಂಜಕೋಟೆ ಸೆಕ್ಟರ್​ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್​ನಿಂದ ಕಳೆದ ಹಲವು ದಿನಗಳಿಂದಲೂ ಕದನ ವಿರಾಮ ಉಲ್ಲಂಘನೆ ನಡಿಯುತ್ತಿದ್ದು ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಗಡಿ ಭಾಗದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದೆ. 

ಗಡಿ ನಿಯಂತ್ರಣ ರೇಖೆ  ಬಳಿಯ ಕೆಲ ಗ್ರಾಮಗಳ ಜನರನ್ನ ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಆರಂಭಿಸಿದ್ದು, ಕಳೆದ ವಾರದಿಂದಲೂ ನೌಶೀರ ಮತ್ತು ಮಂಜಕೋಟೆ ಬಳಿಯ ಜನರು ವಲಸೆ ಹೋಗ್ತಿರೊದು ಇಲ್ಲಿ ಸಾಮಾನ್ಯವಾಗಿದೆ. 

ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಹಾಗೂ ಉಗ್ರರು ಪದೇ ಪದೇ ದಾಳಿ ಮಾಡ್ತಿರೋದು ಸ್ಥಳೀಯ ನಿವಾಸಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದ್ದು  ಜೀವ ಭಯದಲ್ಲೇ ಜನ ಬದುಕು ಸಾಗಿಸ್ತಿದ್ದಾರೆ. ಜತೆಗೆ ಸ್ಥಳೀಯ ಶಾಲಾ ಕಾಲೇಜುಗಳಿಗೆ  ರಜೆ ಗೋಷಿಸಲಾಗಿದೆ. ಗಡಿಯಲ್ಲಿ ಯುದ್ಧದ ವಾತಾವರಣ ಮನೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ