ಪದ್ಮ ಪ್ರಶಸ್ತಿಯ ರೇಸ್'ನಲ್ಲಿ ಧೋನಿ, ಸಾಕ್ಷಿ, ಸಿಂಧು, ಸುಕ್ರಜ್ಜಿ

Published : Jan 24, 2017, 10:04 AM ISTUpdated : Apr 11, 2018, 01:10 PM IST
ಪದ್ಮ ಪ್ರಶಸ್ತಿಯ ರೇಸ್'ನಲ್ಲಿ ಧೋನಿ, ಸಾಕ್ಷಿ, ಸಿಂಧು, ಸುಕ್ರಜ್ಜಿ

ಸಾರಾಂಶ

ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. 

ನವದೆಹಲಿ(ಜ.24): ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ 150 ಮಂದಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು, ಕರ್ನಾಟಕದ ಸುಕ್ರಿ ಬೊಮ್ಮ ಗೌಡ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ರಿಯೊ ಒಲಿಂಪಿಕ್ಸ್ ತಾರೆಗಳಾದ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅಂತಿಮ ಹಂತದ ರೇಸ್'ನಲ್ಲಿದ್ದಾರೆ.

ಕನ್ನಡತಿ ಸುಕ್ರಿ ಅಜ್ಜಿ ಎಂದೇ ಪ್ರಸಿದ್ದಿಯಾಗಿರುವ ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮ ಗೌಡ ಓರ್ವ ಅದ್ಭುತ ಗಾಯಕಿಯಾಗಿದ್ದು, ತಮ್ಮ ಕವಿತೆಯ ಮೂಲಕ ದಮನಿತರ ಪರ ಧ್ವನಿ ಎತ್ತಿ ಗಮನ ಸೆಳೆದದ್ದೂ ಮಾತ್ರವಲ್ಲದೇ ತಮ್ಮ ಸಮುದಾಯದ ಏಳಿಗೆಗೂ ಶ್ರಮಿಸುತ್ತಿದ್ದಾರೆ.     

ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರವಾದ ಪಿ.ವಿ. ಸಿಂಧು ಹಾಗೂ ಸಾಕಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ತಯಾರು ಮಾಡಿದ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್, ಕುಸ್ತಿಯಲ್ಲಿ ಕಂಚಿಗೆ ಮುತ್ತಿಕ್ಕಿದ ಸಾಕ್ಷಿ ಮಲಿಕ್ ಕೂಡ ಪದ್ಮ ಪ್ರಶಸ್ತಿಗೆ ಭಾಜನರಾಗುವ ಸಾಧ್ಯತೆಯಿದೆ.

ಇನ್ನು ಇತ್ತೀಚೆಗಷ್ಟೇ ಸೀಮಿತ ಓವರ್'ಗಳ ನಾಯಕತ್ವ ಸ್ಥಾನದಿಂದ ಕೆಳಗಿಳಿದಿರುವ ಮಹೇಂದ್ರ ಸಿಂಗ್ ಧೋನಿ ಹೆಸರೂ ಕೂಡ ಅಂತಿಮ ಹಂತದ ಪಟ್ಟಿಯಲ್ಲಿದೆ. ಇದಷ್ಟೇ ಅಲ್ಲದೇ ಗೂಗಲ್ ಸಿಇಓ ಸುಂದರ್ ಪಿಚೈ, ಮೈಕ್ರೋಸಾಪ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಹೆಸರುಗಳು ಅಂತಿಮ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.

ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯಾವಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಪೂರಕವಾಗಿಲ್ಲ: ಸರ್ಕಾರದ ಸಮಿತಿ ಶಿಫಾರಸು
ಪ್ರಿಯಾಂಕಾ ಗಾಂಧಿ ಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ: ಪತಿ ರಾಬರ್ಟ್‌ ಸ್ಫೋಟಕ ನುಡಿ