ಬ್ಲಾಕ್ ಮ್ಯಾಜಿಕ್’ಗೆ ಹೆಸರಾದ ಕೊಳ್ಳೆಗಾಲದಲ್ಲಿ ಅದೃಷ್ಟದಾಟಕ್ಕೆ ಇಳಿದಿದ್ದಾರೆ ಪ್ರಮುಖ ರಾಜಕೀಯ ನಾಯಕರು

Published : Mar 08, 2018, 11:11 AM ISTUpdated : Apr 11, 2018, 01:09 PM IST
ಬ್ಲಾಕ್ ಮ್ಯಾಜಿಕ್’ಗೆ ಹೆಸರಾದ ಕೊಳ್ಳೆಗಾಲದಲ್ಲಿ ಅದೃಷ್ಟದಾಟಕ್ಕೆ ಇಳಿದಿದ್ದಾರೆ ಪ್ರಮುಖ ರಾಜಕೀಯ ನಾಯಕರು

ಸಾರಾಂಶ

ಚುನಾವಣೆ ಸಮೀಪಿಸಿದಂತೆ  ನಡೆಯುತ್ತಿದ್ದ   ಅದೃಷ್ಟ  ಸಂಖ್ಯೆಯ ಆಟ ಜೋರಾಗಿದೆ.  ಕೊಳ್ಳೆಗಾಲಕ್ಕೆ  ಬಂದು ರಾಜಕೀಯ ಮುಖಂಡರು ಅದೃಷ್ಟ ಸಂಖ್ಯೆಯ ಆಟಕ್ಕೆ ಇಳಿದಿದ್ದಾರೆ.

ಚಾಮರಾಜನಗರ :  ಚುನಾವಣೆ ಸಮೀಪಿಸಿದಂತೆ  ನಡೆಯುತ್ತಿದ್ದ   ಅದೃಷ್ಟ  ಸಂಖ್ಯೆಯ ಆಟ ಜೋರಾಗಿದೆ.  ಕೊಳ್ಳೆಗಾಲಕ್ಕೆ  ಬಂದು ರಾಜಕೀಯ ಮುಖಂಡರು ಅದೃಷ್ಟ ಸಂಖ್ಯೆಯ ಆಟಕ್ಕೆ ಇಳಿದಿದ್ದಾರೆ.

ಬ್ಲಾಕ್ ಮ್ಯಾಜಿಕ್’ಗೆ  ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಕೊಳ್ಳೆಗಾಲದಲ್ಲಿ ಗೂಬೆಯನ್ನು ಮುಂದಿಟ್ಟುಕೊಂಡು ಅದೃಷ್ಟದಾಟ ನಡೆಸುತ್ತಿದ್ದಾರೆ. ಚುನಾವಣೆ ಸಮೀಸುತ್ತಿರುವುದರಿಂದ ಎಲ್ಲರಿಗೂ ಕೂಡ ಗೆಲುವಿನ ಹಂಬಲ ಇದ್ದು ಈ ನಿಟ್ಟಿನಲ್ಲಿ ಇಲ್ಲಿ ನಂಬಿಕೆಯನ್ನು ಹುಟ್ಟಿಸಿ  ಗೂಬೆಯನ್ನು ಮಾರಾಟ ಮಾಡುವ ಯತ್ನವೂ ಕೂಡ ನಡೆದಿದೆ.

ಇಲ್ಲಿ ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ  ಇಬ್ಬರು ವ್ಯಕ್ತಿಗಳನ್ನು ಡಿಸಿಬಿಐ ಪೊಲೀಶರು ಬಂಧಿಸಿದ್ದಾರೆ. ಬಂಧಿತರಿಂದ 2.5 ಕೆಜಿ ತೂಕದ ಗೂಬೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ  ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ರುಪಾಯಿಗೆ ಗೂಬೆಯನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ವಿಚಾರವೂ ತಿಳಿದಿದ್ದು, ಅದೃಷ್ಟ ಒಲಿಯುತ್ತದೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದವರಿಂದ ಇಲ್ಲಿಗೆ ಬಂದು ರಾಜಕೀಯ ಮುಖಂಡರು ಗೂಬೆಯನ್ನು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?