
ನವದೆಹಲಿ(ಫೆ.24): ಆತ್ಮಹತ್ಯೆಗೆ ಬಹುಮುಖ್ಯ ಕಾರಣಗಳಲ್ಲಿ ಒಂದಾಗಿರುವ ಖಿನ್ನತೆ ದೇಶದ ಸರಿಸುಮಾರು 5.66 ಕೋಟಿ ಜನರನ್ನು ಕಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.4.5ರಷ್ಟು ಜನರನ್ನು ಈ ಸಮಸ್ಯೆ ಬಾಸುತ್ತಿದೆ. ಜಾಗತಿಕವಾಗಿ ಈ ಪ್ರಮಾಣ ಶೇ.4.4ರಷ್ಟು ಮಾತ್ರ ಇದೆ ಎಂದು ತಿಳಿಸಿರುವುದರಿಂದ ಭಾರತದಲ್ಲಿ ಖಿನ್ನತೆ ಪ್ರಮಾಣ ಜಾಗತಿಕ ಸರಾಸರಿಗಿಂತ ಹೆಚ್ಚು ಎಂಬುದು ಬಹಿರಂಗವಾಗಿದೆ.
ಇದೇ ವೇಳೆ, ಪಾಕಿಸ್ತಾನ (ಶೇ.4.2), ಬಾಂಗ್ಲಾದೇಶ (ಶೇ.4.1) ಸೇರಿದಂತೆ ಆಗ್ನೇಯ ಏಷ್ಯಾ ವಲಯದಲ್ಲಿನ 11 ದೇಶಗಳಿಗೆ ಹೋಲಿಸಿದರೂ ಭಾರತದಲ್ಲೇ ಖಿನ್ನತೆ ಪ್ರಮಾಣ ಅಕವಾಗಿದೆ ಎಂದು ಹೇಳಿದೆ.
ಭಾರತದ 5,66,75,969 ಜನರು ಖಿನ್ನತೆಗೆ ಒಳಗಾಗಿದ್ದು, ಆ ಪೈಕಿ ಶೇ.3ರಷ್ಟು (3,84,25,093) ಜನರು ಆತಂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ತಿಳಿಸಿದೆ. 2015ರೊಂದರಲ್ಲೇ ಖಿನ್ನತೆಯಿಂದಾಗಿ ವಿಶ್ವದಲ್ಲಿ 8 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.