ನಾಡಿದ್ದು ಕಮಲ್ ಹಾಸನ್ ಪಕ್ಷ ಘೋಷಣೆ; ಪಕ್ಷ ಸ್ಥಾಪನೆಗೂ ಮುನ್ನ ರಜನಿಕಾಂತ್ ಭೇಟಿ ಮಾಡಿದ ನಟ

Published : Feb 19, 2018, 09:26 AM ISTUpdated : Apr 11, 2018, 01:09 PM IST
ನಾಡಿದ್ದು ಕಮಲ್ ಹಾಸನ್ ಪಕ್ಷ ಘೋಷಣೆ; ಪಕ್ಷ ಸ್ಥಾಪನೆಗೂ ಮುನ್ನ ರಜನಿಕಾಂತ್ ಭೇಟಿ ಮಾಡಿದ ನಟ

ಸಾರಾಂಶ

ಕಮಲ್, ಬುಧವಾರ ಮದುರೈನಲ್ಲಿ ತಮ್ಮ ನೂತನ ಪಕ್ಷದ ಹೆಸರು, ಚಿಹ್ನೆ ಪ್ರಕಟಿಸುವ ಮೂಲಕ ಅಧಿಕೃತವಾಗಿವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ, ಕಮಲ್ ಭಾನುವಾರ ಇಲ್ಲಿ ರಾಜಕಾರಣಿಯಾಗಿ ಪರಿವರ್ತಿತರಾಗುತ್ತಿರುವ ಇನ್ನೊಬ್ಬ ನಟ ರಜನೀಕಾಂತ್ ಅವರನ್ನು ದಿಢೀರ್ ಭೇಟಿ ಮಾಡಿದರು.

ಚೆನ್ನೈ(ಫೆ.19): ನಟ ರಜನೀಕಾಂತ್ ತಾವು ಸ್ಥಾಪಿಸಲಿರುವ ನೂತನ ಪಕ್ಷದ ಚಿಹ್ನೆ, ಅದಕ್ಕೆ ಸಂಬಂಧಿಸಿದ ಆ್ಯಪ್ ಬಿಡುಗಡೆ ಮಾಡಿದ ಬೆನ್ನಲ್ಲೇ, ತಮಿಳುನಾಡಿನ ಮತ್ತೋರ್ವ ಖ್ಯಾತ ನಟ ಕಮಲ್‌ಹಾಸನ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ.

ಕಮಲ್, ಬುಧವಾರ ಮದುರೈನಲ್ಲಿ ತಮ್ಮ ನೂತನ ಪಕ್ಷದ ಹೆಸರು, ಚಿಹ್ನೆ ಪ್ರಕಟಿಸುವ ಮೂಲಕ ಅಧಿಕೃತವಾಗಿವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ, ಕಮಲ್ ಭಾನುವಾರ ಇಲ್ಲಿ ರಾಜಕಾರಣಿಯಾಗಿ ಪರಿವರ್ತಿತರಾಗುತ್ತಿರುವ ಇನ್ನೊಬ್ಬ ನಟ ರಜನೀಕಾಂತ್ ಅವರನ್ನು ದಿಢೀರ್ ಭೇಟಿ ಮಾಡಿದರು. ಚೆನ್ನೈನ ರಜನಿ ಅವರ ಪೋಯೆಸ್ ಗಾರ್ಡನ್‌'ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಕಮಲ್, ‘ಇದೊಂದು ಸೌಜನ್ಯದ ಭೇಟಿಯಷ್ಟೇ’ ಎಂದು ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದರು.

‘ಇದು ರಾಜಕೀಯ ಭೇಟಿ ಆಗಿರಲಿಲ್ಲ. ನಾನು ರಾಜಕೀಯ ಪ್ರವೇಶಿಸುವ ನನ್ನ ನಿರ್ಧಾರವನ್ನು ತಿಳಿಸಿದೆ. ನಾನು ರಾಜಕೀಯ ಪಯಣ ಆರಂಭಿಸುವ ಮುನ್ನ ಅನೇಕರನ್ನು ಭೇಟಿಯಾಗುತ್ತಿದ್ದೇನೆ. ಗೆಳೆತನದ ಭಾಗವೇ ಈ ಭೇಟಿ. ರಾಜಕೀಯವಲ್ಲ’ ಎಂದು ಕಮಲ್ ಸ್ಪಷ್ಟಪಡಿಸಿದರು. ರಜನೀಕಾಂತ್ ಪ್ರತಿಕ್ರಿಯಿಸಿ, ‘ಕಮಲ್ ತಮಿಳುನಾಡಿನ ಜನರ ಸೇವೆ ಮಾಡಲು ಬಯಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅವರು ಹೆಸರು-ಹಣ ಗಳಿಸಲು ರಾಜಕೀಯ ಪ್ರವೇಶಿಸಿಲ್ಲ. ಜನಸೇವೆ ದೃಷ್ಟಿಯಿಂದ ಆಗಮಿಸಿದ್ದಾರೆ’ ಎಂದರು.‘ಸಿನಿಮಾಗಳಲ್ಲೂ ನನ್ನ ಮತ್ತು ಅವರ ಪಾತ್ರಗಳೇ ಬೇರೆ’ ಎಂದೂ ರಜನಿ ಮಾರ್ಮಿಕವಾಗಿ ನುಡಿದರು.

ಹೊಸ ಪಕ್ಷ: ಬುಧವಾರ ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಮದುರೈವರೆಗೆ ರ್ಯಾಲಿ ನಡೆಸಲಿರುವ ಕಮಲ್, ಅಲ್ಲಿ ಹೊಸ ಪಕ್ಷದ ಹೆಸರು ಚಿಹ್ನೆ ಪ್ರಕಟಿಸಲಿದ್ದಾರೆ. ಜೊತೆಗೆ ಅಲ್ಲಿಂದಲೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ