
ತಿರುವನಂತಪುರಂ (ಜು.04): ಪದ್ಮನಾಭ ದೇವಾಲಯದಲ್ಲಿ 8 ವಜ್ರದ ಹರಳುಗಳು ಕಾಣೆಯಾಗಿವೆ ಎಂದು ಅಮಿಕಸ್ ಕ್ಯುರಿ ಸುಪ್ರೋಕೋರ್ಟ್’ಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ದೇವಸ್ಥಾನದ ಒಳಭಾಗದಲ್ಲಿರುವ ಕೊಠಡಿ ಬಿ (ಬಿ ವಾಲ್ಟ್) ನ್ನು ತೆರೆಯುವಂತೆ ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ಹೇಳಿದೆ.
ಬಿ ವಾಲ್ಟ್ ತೆರೆಯುವುದರಿಂದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದಂತಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಅನುಮೋದಿಸಿದೆ.
2011 ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 5 ವಾಲ್ಟ್’ಗಳನ್ನು ತೆರೆಯಲಾಗಿದೆ. ಆದರೆ ಬಿ ವಾಲ್ಟನ್ನು ಮಾತ್ರ ಎಷ್ಟೋ ವರ್ಷಗಳಿಂದ ತೆರೆಯದೇ ನಿಗೂಢವಾಗಿತ್ತು. 8 ವಜ್ರದ ಹರಳುಗಳು ನಾಪತ್ತೆಯಾಗಿರುವುದರಿಂದ ಇದೀಗ ಬಿ ವಾಲ್ಟನ್ನು ತೆರೆಯದೇ ಇದ್ದರೆ ಅನುಮಾನಗಳನ್ನು ಹುಟ್ಟು ಹಾಕುತ್ತದೆ. ಅಮಿಕಸ್ ಕ್ಯುರಿ ರಾಜ ಕುಟುಂಬದ ಜೊತೆ ಮಾತುಕತೆ ನಡೆಸಿ ಅವರ ಅಭಿಪ್ರಾಯಗಳನ್ನು ಕೇಳಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.