ವಾನ್ನಾ ಕ್ರೈನಿಂದ ಪಾರಾಗಲು ಎಟಿಎಂ ಬಂದ್'ಗೆ RBI ಸೂಚನೆ: ಮೋದಿ ಕನಸಿಗೆ ಬೀಳುತ್ತಾ ಕೊಕ್ಕೆ?

Published : May 16, 2017, 08:13 AM ISTUpdated : Apr 11, 2018, 12:34 PM IST
ವಾನ್ನಾ ಕ್ರೈನಿಂದ ಪಾರಾಗಲು ಎಟಿಎಂ ಬಂದ್'ಗೆ RBI ಸೂಚನೆ: ಮೋದಿ ಕನಸಿಗೆ ಬೀಳುತ್ತಾ ಕೊಕ್ಕೆ?

ಸಾರಾಂಶ

ಸೈಬರ್​ ದಾಳಿಕೋರರು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳ ಕಂಪ್ಯೂಟರ್ ಜಗತ್ತಿಗೇ ಕನ್ನ ಹಾಕಿದ್ದಾರೆ.  ಈ ಸೈಬರ್ ದುಷ್ಟರ ಕಣ್ಣು ಭಾರತವನ್ನೂ ಬಿಟ್ಟಿಲ್ಲ.. ಅರ್ಥ ವ್ಯವಸ್ಥೆಯ ಬಹುಭಾಗವಾದ ಎಟಿಎಂಗಳ ವಶಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶದಾದ್ಯಂತ  ಖಾಸಗಿ  ಎಟಿಎಂಗಳು ಬಂದ್​ ಆಗಿದೆ.

ನವದೆಹಲಿ(ಮೇ.16): ಸೈಬರ್​ ದಾಳಿಕೋರರು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳ ಕಂಪ್ಯೂಟರ್ ಜಗತ್ತಿಗೇ ಕನ್ನ ಹಾಕಿದ್ದಾರೆ.  ಈ ಸೈಬರ್ ದುಷ್ಟರ ಕಣ್ಣು ಭಾರತವನ್ನೂ ಬಿಟ್ಟಿಲ್ಲ.. ಅರ್ಥ ವ್ಯವಸ್ಥೆಯ ಬಹುಭಾಗವಾದ ಎಟಿಎಂಗಳ ವಶಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶದಾದ್ಯಂತ  ಖಾಸಗಿ  ಎಟಿಎಂಗಳು ಬಂದ್​ ಆಗಿದೆ.

ಎಟಿಎಂಗಳಲ್ಲಿ ಮತ್ತೆ ಹಣಕ್ಕಾಗಿ ಪರದಾಡುವಂತಹ ಪರಿಸ್ಥಿತಿ  ನಿರ್ಮಾಣವಾಗಿದೆ. ಜಗತ್ತಿನಾದ್ಯಂತ  ಸುಮಾರು 60 ಸಾವಿರ ಕಂಪನಿಗಳ ಸರಾಸರಿ 20 ಲಕ್ಷಕ್ಕೂ ಹೆಚ್ಚು​​ ಕಂಪ್ಯೂಟರ್​ಗಳು  ರಾನ್ಸಮ್​​​ ವೇರ್  ವೈರೆಸ್'ಗೆ ತುತ್ತಾಗಿದೆ. ಹ್ಯಾಕರ್'​ಗಳು ವೈರಸ್​'ಗಳನ್ನು ಇ-ಮೇಲ್ ಮುಖಾಂತರ ಅಥವಾ ಪಾಪ್ ಅಪ್ ಮುಖಾಂತರ ರವಾನಿಸಿ ಹ್ಯಾಕ್ ಮಾಡಿದ್ದಾರೆ. ಇದರಿಂದ  ಭಾರತದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದ್ದು ಬ್ಯಾಂಕ್​ ಮತ್ತು ATM ವ್ಯವಹಾರಕ್ಕೆ  ತೊಂದರೆಯಾಗಿದೆ. ಸೈಬರ್ ದಾಳಿಯ ಅಟ್ಟಹಾಸಕ್ಕೆ  ಪ್ರಧಾನಿ ಮೋದಿ ಅವರ ಆನ್​ಲೈನ್​ ಕನಸಿಗೆ ಕೊಕ್ಕೆ ಬೀಳಲಿದೆ.  

ಗ್ರಾಹಕರ ಹಿತ ಮುಖ್ಯ 

ಪ್ರಪಂಚದಾದ್ಯಂತ ವೈರಸ್ ಅಲರ್ಟ್ ಹಿನ್ನೆಲೆಯಲ್ಲಿ  ಖಾಸಗಿ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬದಂತೆ ಆರ್​ಬಿಐ ನಿರ್ದೇಶನ ಮಾಡಿದೆ. ಬೆಂಗಳೂರಿನಾದ್ಯಂತ ಖಾಸಗಿ ಬ್ಯಾಂಕ್ ಎಟಿಎಂಗಳು ಬಂದ್  ಆಗಿದ್ದು , ಇನ್ನು 3 ದಿನ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲಿ ಹಣ ಸಿಗುವುದು ಅನುಮಾನ. ಆದರೆ ಸರ್ಕಾರಿ ಬ್ಯಾಂಕ್ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ

ವಿಶ್ವಾದ್ಯಂತ ಏಕಕಾಲದಲ್ಲಿ ನಡೆದ ಸೈಬರ್ ದಾಳಿಯಿಂದಾಗಿ ಬ್ಯಾಂಕ್'ಗಳ ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಟಿಎಂ ಗಳಲ್ಲಿನ ಸಿಸ್ಟಮ್​ ಅಪ್​ ಡೇಟ್​ ಕಾರ್ಯಕ್ಕೆ ಆರ್ ಬಿಐ   ಸೂಚನೆ ನೀಡಿದೆ. ಈಗಾಗಲೇ ಹಲವು ಬ್ಯಾಂಕ್ ಗಳ ಎಟಿಎಂಗಳು ಕಾರ್ಯ ಸ್ಥಗಿತ ಮಾಡಿದ್ದು,  ಎಟಿಎಂ ದುರಸ್ತಿಯಲ್ಲಿದೆ ಎಂಬ ಬೋರ್ಡ್ ಗಳು ಸಾಮಾನ್ಯವಾಗಿವೆ. ಸದ್ಯ ದೇಶದಲ್ಲಿರುವ 2.25 ಲಕ್ಷ ಎಟಿಎಂಗಳ ಪೈಕಿ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದ್ದು, ಈ  ಎಲ್ಲಾ ಎಟಿಎಂಗಳು ಅಪ್​ಡೇಟ್ ಆಗುವವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ.

ಒಟ್ಟಿನಲ್ಲಿ ಸೈಬರ್​ ದಾಳಿಯಿಂದ 60 ಸಾವಿರ ಕಂಪನಿಗಳ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಿದೆ. ಮತ್ತೊಂದು ಹ್ಯಾಕರ್​ಗಳು ನಿಗದಿತ ಸಮಯದಲ್ಲಿ ಹಣ ನೀಡದಿದ್ರೆ ಮತ್ತೊಂದು ದಾಳಿ ಮಾಡ್ತೀವಿ ಅನ್ನೋ ಬೆದರಿಕೆಯ ಸಂದೇಶ ರವಾನಿಸಿದ್ದಾರೆ. ಹೀಗಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ಗಳಿಗೆ xp operating system ಅಪ್​ಡೇಟ್​​ ಆಗುವರೆಗೂ ATM ಕೇಂದ್ರಗಳನ್ನ ತೆರೆಯಬೇಡಿ ಅಂತ ಸೂಚಿಸಿದೆ. ಯಾವುದಕ್ಕೂ  ನೀವು  ನಿಮ್ಮ  ಸಿಸ್ಟಮ್​ ಬಗ್ಗೆ ಹುಷಾರಾಗಿರಿ . ಹ್ಯಾಕರ್​'ಗಳು  ನಿಮ್ಮ  ದಾಖಲೆ ಕದಿಯಲು ಹೊಂಚು ಹಾಕಿ ಕುಳಿತಿರುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಪರಿವರ್ತನೆ ಇನ್ನು ಅತಿ ಸರಳ
ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ